
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಂದಿಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಜ್ಯೋತಿರ್ಲಿಂಗ (ಜ್ಯೋತಿಭಾ) ದೇವಸ್ಥಾನದ ಕಟ್ಟಡ ಭಾನುವಾರ ಉದ್ಘಾಟನೆಯಾಯಿತು.

ದೇವಸ್ಥಾನ ನಿರ್ಮಾಣದಿಂದಾಗಿ ಗ್ರಾಮದ ವಾತಾವರಣವೇ ಬದಲಾಗಲಿದೆ. ಜನರಲ್ಲಿ ಶಾಶ್ವತವಾಗಿ ನೆಮ್ಮದಿ ನೆಲೆಸಲಿದೆ. ದೇವಸಥಾನಕ್ಕೆ ಮತ್ತೇನಾದರೂ ಆಗಬೇಕಿದ್ದಲ್ಲಿ ಗಮನಕ್ಕೆ ತಂದರೆ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಮೃಣಾಲ ಹೆಬ್ಬಾಳಕರ್ ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಗ್ರಾಮದ ಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.