Belagavi NewsBelgaum NewsKarnataka News
*ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ವಿರುದ್ಧ ಅವಿಶ್ವಾಸ ನಿರ್ಣಯ: ಅಧ್ಯಕ್ಷರ ಬದಲಾವಣೆ ಸಾಧ್ಯತೆ*

ಪ್ರಗತಿವಾಹಿನಿ ಸುದ್ದಿ: ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬಿಜೆಪಿಯ ಬೆಳಗಳಿ ಪ್ರಕಾಶ್ ವಿರುದ್ಧ ಬ್ಯಾಂಕ್ ನ ಎಂಟು ಜನ ಸದಸ್ಯರು ಅಸಮಾದಾನ ಹೊರ ಹಾಕಿರುವ ಕಾರಣ ಬೆಳ್ಳಿ ಪ್ರಕಾಶ್ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದೆ.
ಈ ಸದಸ್ಯರು ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದಾರೆ. ಲಕ್ಷ್ಮಣ ಸವದಿ, ಎಂ.ಸಿ.ಸುಧಾಕರ್, ಅರೆಬೈಲು ಶಿವರಾಮ ಹೆಬ್ಬಾರ್, ಮಂಜುನಾಥಗೌಡ, ರವಿ ಸೇರಿದಂತೆ ಒಟ್ಟು ಎಂಟು ಜನರು ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದಾರೆ.
ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ದೇವರಾಜು ಅವರಿಗೆ ತಮ್ಮ ಅವಿಶ್ವಾಸ ನಿರ್ಣಯ ಪತ್ರವನ್ನು ಸಲ್ಲಿಕೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ 15 ದಿನಗಳಲ್ಲಿ ಅಧ್ಯಕ್ಷರ ಮರು ಆಯ್ಕೆಯಾಗುವ ಸಂಭವವಿದ್ದು ಬೆಳ್ಳಿ ಪ್ರಕಾಶ್ ಅವರು ಅಧಿಕಾರದಿಂದ ಇಳಿಯುವುದು ಬಹುತೇಕ ಖಚಿತ ಎಂದು ತಿಳಿದುಬಂದಿದೆ. ಎಂಎಲ್ಸಿ ರವಿ ಮತ್ತು ಲಕ್ಷ್ಮಣ ಸವದಿ ಅವರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆಂದೂ ಹೇಳಲಾಗುತ್ತಿದೆ.