Kannada NewsKarnataka NewsPolitics

ಪ್ರಜ್ವಲ್ ಬಂಧನಕ್ಕೆ ಎಸ್ಐಟಿ ವಿದೇಶಕ್ಕೆ ಹೋಗುವ ಅಗತ್ಯ ಇಲ್ಲ: ಗೃಹ ಸಚಿವ ಪರಮೇಶ್ವರ್

ಪ್ರಗತಿವಾಹಿನಿ ಸುದ್ದಿ:  ಪ್ರಜ್ವಲ್ ಪ್ರಕರಣ​​​ದಲ್ಲಿ ಈಗಾಗಲೇ ಬ್ಲೂ ಕಾರ್ನರ್​ ನೋಟಿಸ್​ ಜಾರಿ ಮಾಡಿದ್ದೇವೆ. ಎಸ್​​ಐಟಿ ಅಧಿಕಾರಿಗಳು ವಿದೇಶಕ್ಕೆ ಹೋಗಿ ಅವರನ್ನು ಪತ್ತೆ ಹಚ್ಚುವ ಅಗತ್ಯವಿಲ್ಲ. ಆದ್ದರಿಂದ ಇಂಟರ್​​​ಪೋಲ್​​ ಅಧಿಕಾರಿಗಳೇ ಎಸ್​​ಐಟಿ ಅಧಿಕಾರಿಗಳಿಗೆ ಮಾಹಿತಿ ಪೂರೈಸಲಿದ್ದಾರೆ ಎಂದು ಹೋಮ್ ಮಿನಿಸ್ಟರ್ ಡಾ.ಜಿ.ಪರಮೇಶ್ವರ್ ಅವರು ವಾರ್ನಿಂಗ್ ನೀಡಿದ್ದಾರೆ‌‌. 

ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಂಸದ ಪ್ರಜ್ವಲ್​​ ರೇವಣ್ಣದ್ದೆ ಎನ್ನಲಾದ ಅಶ್ಲೀಲ ವಿಡಿಯೋ ಕೇಸ್​  ಸಂಬಂಧ ಹೇಳಿಕೆ ನೀಡುವವರ ವಿರುದ್ಧವೂ 41 A ಪ್ರಕಾರ ವಿಚಾರಣೆ ನಡೆಸಬೇಕಾಗುತ್ತದೆ. ಪ್ರಕರಣದ ಬಗ್ಗೆ ಪ್ರತಿ ಸಾರ್ವಜನಿಕ ಹೇಳಿಕೆಗಳಿಗೆ ನಾವು ಉತ್ತರಿಸಲು ಆಗುವುದಿಲ್ಲ. ಅನಗತ್ಯವಾಗಿ ಹೇಳಿಕೆ ನೀಡುವ ನಾಯಕರು ಎಚ್ಚರಿಕೆಯಿಂದ ಮಾತನಾಡಬೇಕು ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button