Belagavi NewsBelgaum News

*20 ರಂದು “ವಿದ್ಯುತ್ ಗ್ರಾಹಕರ ಕುಂದು ಕೊರತೆಗಳ ನಿವಾರಣಾ ಸಭೆ”*


ಪ್ರಗತಿವಾಹಿನಿ ಸುದ್ದಿ ಬೆಳಗಾವಿ : ಬೆಳಗಾವಿಯ ಕೆ.ಇ.ಆರ್.ಸಿ ಹಾಗೂ ಹೆಸ್ತಾಂ ನಿಗಮ ಕಛೇರಿಯರವರ ನಿರ್ದೇಶನಗಳ ಮೇರೆಗೆ ಕಾಪಾ, ನಗರ ಉಪವಿಭಾಗ-೦೩, ಹುವಿಸಕಂನಿ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್), ರವರ ಅಧ್ಯಕ್ಷತೆಯಲ್ಲಿ ನಗರದ ಕಾರ್ಯ ಮತ್ತು ಪಾಲನೆ, ನಗರ ಉಪ ವಿಭಾಗ ನಂ-೩ ರ ಕಛೇರಿಯಲ್ಲಿ ಶನಿವಾರ (ಜ.೨೦) ೨೦೨೪ ರಂದು ಬೆಳಗ್ಗೆ ೧೦:೩೦ ಘಂಟೆಗೆ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳ ನಿವಾರಣಾ ಸಭೆ’ ಆಯೋಜಿಸಲಾಗಿದೆ.

ಗ್ರಾಹಕರು ಸಭೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆ ಕುಂದು ಕೊರತೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ಹುವಿಸಕಂನಿಂ ಬೆಳಗಾವಿಯ ಕಾಪಾ ನಗರ ಉಪ ವಿಭಾಗ ನಂ-೩, ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button