NationalPolitics

*ಆಪರೇಷನ್ ಲಂಗ್ಡಾ: 11 ಗಂಟೆಯಲ್ಲಿ 24 ಕ್ರಿಮಿಗಳ ಎನ್ಕೌಂಟರ್*

ಪ್ರಗತಿವಾಹಿನಿ ಸುದ್ದಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತಮ್ಮದೆಯಾದ ಶೈಲಿಯಲ್ಲಿ ಕಾರ್ಯಚರಣೆಗೆ ಹೆಸರುವಾಸಿಯಾದವರು. ಈಗ ರೌಡಿಗಳ ಮಟ್ಟಹಾಕಲು ಮುಂದಾಗಿದ್ದು, 24 ಗಂಟೆಯಲ್ಲೇ 11 ಜನರ ಎನ್ಕೌಂಟರ್ ಮಾಡಲಾಗಿದೆ.‌

ಪದೇ ಪದೇ ಅಪರಾಧ ಎಸಗುವವರ ಮೇಲೆ ಈ ರೀತಿಯ ಕ್ರಮ ಕೈಗೊಂಡು, ಭವಿಷ್ಯದಲ್ಲಿ ಇಂತಹ ಅಪರಾಧಗಳನ್ನು ತಡೆಗಟ್ಟಲು ಉತ್ತರ ಪ್ರದೇಶ ಪೊಲೀಸರು ‘ಆಪರೇಷನ್‌ ಲಂಗ್ಡಾ’ ಕಾರ್ಯಾಚರಣೆಯನ್ನು ಆರಂಭಿಸಿದೆ.

ಲಂಗ್ಡಾ ಎಂಬ ಹೊಸ ಕಾರ್ಯಾಚರಣೆ ಮೂಲಕ ಉತ್ತರ ಪ್ರದೇಶದ 8 ನಗರಗಳಲ್ಲಿ 24 ಗಂಟೆಗಳಲ್ಲಿ ಪೊಲೀಸರು 11 ಅಪರಾಧಿಗಳಿಗೆ ಗುಂಡೇಟು ಹೊಡೆದಿದ್ದಾರೆ.

ಅಪರಾಧ ನಿಯಂತ್ರಣಕ್ಕಾಗಿ ಆರಂಭಿಸಿದ ಈ ವಿಶೇಷ ಕಾರ್ಯಾಚರಣೆಯಲ್ಲಿ, ರಾಜ್ಯದ ಕ್ರಿಮಿನಲ್‌ಗಳು, ಅತ್ಯಾಚಾರಿಗಳಿಗೆ, ಕೊಲೆಗಾರರು ಮತ್ತು ದರೋಡೆಕೋರರಿಗೆ ಖಡಕ್ ಸಂದೇಶ ನೀಡಲಾಗುತ್ತಿದೆ. ಈ ಆಪರೇಷನ್‌ನಲ್ಲಿ ಅಪರಾಧಿಗಳನ್ನು ಕೊಲ್ಲಲಾಗುವುದಿಲ್ಲ – ಬದಲಿಗೆ ಅವರ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗುತ್ತದೆ.

Home add -Advt

ಬಂಧಿತರೆಲ್ಲರೂ ಉತ್ತರ ಪ್ರದೇಶ ಪೊಲೀಸರ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದವರು. ಈ ಎನ್‌ಕೌಂಟರ್‌ಗಳಲ್ಲಿ ಕೆಲ ಅಪರಾಧಿಗಳು ಪೊಲೀಸರ ಮೇಲೆಯೇ ಗುಂಡು ಹಾರಿಸಿರುವುದಾಗಿ ವರದಿಯಾಗಿದೆ.

Related Articles

Back to top button