LatestNationalWorld

*ಪಾಕ್ ಪರಮಾಣು ಕೇಂದ್ರ ಬ್ಲಾಸ್ಟ್?*

ಪ್ರಗತಿವಾಹಿನಿ ಸುದ್ದಿ, ನವದೆಹಲಿ:
ಕಳೆದ ಐದು ದಿನಗಳಿಂದ ಪಾಕ್ ವಿರುದ್ಧ ಭಾರತ ಕೈಗೊಂಡಿರುವ ಆಪರೇಶನ್ ಸಿಂಧೂರನಲ್ಲಿ ಪಾಕ್ ನ ಪರಮಾಣು ಕೇಂದ್ರ ನಾಶವಾಗಿದೆಯೇ ?

ಹೀಗೊಂದು ಮಾಹಿತಿ ಮೂಲಗಳಿಂದ ಹೊರಬೀಳುತ್ತಿದೆ.


ಕಾಶ್ಮೀರದ ಪಹಲ್ಗಾಮ್ ನಲ್ಲಿ ಪಾಕ್ ಉಗ್ರರು ನರಮೇದ ನಡೆಸಿದ್ದರು. ಇದಕ್ಕೆ ಪ್ರತಿಕಾರವಾಗಿ ಭಾರತ ಆಪರೇಶನ್ ಸಿಂದೂರ ಕಾರ್ಯಾಚರಣೆ ಕೈಗೊಂಡಿತು.

ಭಾರತದ ನೌಕಾ ಸೇನೆ ಪಾಕಿಸ್ತಾನದ ಕರಾಚಿ ಬಂದರನ್ನೇ ಉಡಾಯಿಸಿದ್ದರೆ ವಾಯು ಸೇನೆ ಪಾಕಿಸ್ತಾನದ 9 ಕ್ಕೂ ಹೆಚ್ಚು ಉಗ್ರರ ನೆಲೆಗಳನ್ನು ಧ್ವಂಸ ಮಾಡಿದೆ. ಅನೇಕ ಪ್ರಮುಖ ಏರ್ ಬೇಸ್ ಗಳನ್ನು ನಾಶಪಡಿಸಿದೆ.
ಈ ನಡುವೆ ಪಾಕಿಸ್ತಾನದ ಪರಮಾಣು ಕೇಂದ್ರದ ಮೇಲೆಯೇ ಭಾರತ ಕ್ಷಿಪಣಿ ದಾಳಿ ನಡೆಸಿರುವ ಮಾತು ಕೇಳಿಬರುತ್ತಿದೆ. ರಾವಲ್ಪಿಂಡಿ ಬಳಿ ಭಾರತ ನಡೆಸಿದ ಕ್ಷಿಪಣಿ ದಾಳಿ ವೇಳೆ ಪಾಕಿಸ್ತಾನದ ಪರಮಾಣು ಕೇಂದ್ರ ನಾಶವಾಗಿರುವ ಬಲವಾದ ಅನುಮಾನ ವ್ಯಕ್ತವಾಗಿದೆ.

Home add -Advt


ರಷ್ಯಾ ಮತ್ತು ಅಮೇರಿಕದ ವಿಜ್ಞಾನಿಗಳು ಸ್ಥಳಕ್ಕೆ ಧಾವಿಸಿ ವಿಕಿರಣ ಸೋರಿಕೆಯ ಅಪಾಯದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.


ಪಾಕ್ ಶರಣಾಗತಿಗೆ ಇದುವೇ ಕಾರಣ ?
ಕೆಲವು ಮೂಲಗಳ ಪ್ರಕಾರ ಭಾರತ ಉದ್ದೇಶಪೂರ್ವಕವಾಗಿ ಪಾಕ್ ಪರಮಾಣು ಕೇಂದ್ರದ ಅತೀ ಸಮೀಪಕ್ಕೆ ಕ್ಷಿಪಣಿ ದಾಳಿ ನಡೆಸಿದೆ. ಆ ಮೂಲಕ ಪಾಕಿಸ್ತಾನದ ಪರಮಾಣು ಶಕ್ತಿಯನ್ನು ಉಡಾಯಿಸುವ ಎಚ್ಚರಿಕೆ ನೀಡಿದೆ.

ಇದರಿಂದ ಬೆಚ್ಚಿ ಬಿದ್ದಿರುವ ಪಾಕ್ ತಕ್ಷಣ ಯುದ್ಧ ನಿಲ್ಲಿಸಲು ಭಾರತದ ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಆಪರೇಶನ್ಸ್ ಗೆ ಕರೆ ಮಾಡಿ ಶರಣಾಗತಿ ಕೋರಿತು ಎನ್ನಲಾಗಿದೆ.

ಈ ವಿಷಯ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಆದರೆ ಎರಡೂ ದೇಶದ ಸರಕಾರಗಳು ಇನ್ನೂ ಖಚಿತಪಡಿಸಿಲ್ಲ.

Related Articles

Back to top button