Kannada NewsKarnataka NewsLatest
ಪಾಂಡರಿ ನದಿ ಪ್ರವಾಹ: ರೈಲು ಮಾರ್ಗದಲ್ಲಿ ಭೂ ಕುಸಿತ

https://youtu.be/J3J6QgaUapE
ಪ್ರಗತಿವಾಹಿನಿ ಸುದ್ದಿ, ಖಾನಾಪುರ/ ಲೋಂಡಾ – ಶಿವಠಾಣ ರೈಲುನಿಲ್ದಾಣದ ಬಳಿ ಲೋಂಡಾ ಹುಬ್ಬಳ್ಳಿ ರೈಲು ಮಾರ್ಗದಲ್ಲಿ ಭೂ ಕುಸಿತ ಉಂಟಾಗಿದೆ. ಉಕ್ಕಿ ಹರಿಯುತ್ತಿರುವ ಪಾಂಡರಿ ನದಿ ಪ್ರವಾಹದಿಂದಾಗಿ ರೈಲ್ವೆ ಹಳಿಗಳ ಪಕ್ಕದ ಭಾಗ ಕುಸಿದಿದೆ.
ಜೊತೆಗೆ, ಲೋಂಡಾ ಗ್ರಾಮದ ಸಮೀಪದಲ್ಲಿರುವ ಸಾತನಾಳಿ ಗ್ರಾಮಕ್ಕೆ ಸಂಪರ್ಕಿಸುವ ಅಪಾಯಕಾರಿ ಕಟ್ಟಿಗೆ ತೂಗು ಸೇತುವೆ ಮೇಲಿಂದ ಪಾಂಡರಿ ನದಿ ನೀರು ಹರಿಯುತ್ತಿದೆ.
ಸಾತನಾಳಿ ಮಾಚಾಳಿ ಈ ಭಾಗದ ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಪಾಂಡರಿ ನದಿ ಸೇತುವೆಗೆ ಸರಕಾರ 2 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದ್ದರೂ ಇನ್ನೂ ಕೆಲಸ ಪ್ರಾರಂಭವಾಗಿಲ್ಲ.
Khanapgur Taluku Todays Rainfall Report
Date :17.08.2020
1) Knp : 135.2
2) Nag : 144.4
3) Beedi : 142.8
4) Kakkeri : 112.6
5 ) Asoga : 126.2
6) Gunji : 184.6
7) Londa Rly : 154.0
8) Londay pwd : 136.0
9) Jamboti : 127.0
10) Kankumbi : 214.4




