Kannada NewsKarnataka NewsLatest

​ ಆಧ್ಯಾತ್ಮಿಕ ಕೆಲಸಗಳಿಂದ ಮನಸ್ಸಿಗೆ ​ ಶಾಂತಿ, ನೆಮ್ಮದಿ – ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ​ಬೆಳಗಾವಿ –  ​ ಆಧ್ಯಾತ್ಮಿಕ ಕೆಲಸಗಳು ಮನಸ್ಸಿಗೆ ​ ಶಾಂತಿ, ನೆಮ್ಮದಿ ನೀಡು​ತ್ತವೆ. ಹಾಗಾಗಿಯೇ ಜನರ ನೆಮ್ಮದಿಗೋಸ್ಕರ ಕ್ಷೇತ್ರದಲ್ಲಿ ಅತಿ ಹೆಚ್ಚು ಮಠ, ಮಂದಿರಗಳ ಜೀರ್ಣೋದ್ಧಾರಕ್ಕೆ ನೆರವು ನೀಡಲಾಗಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದರು.
ಬಡಾಲ ಅಂಕಲಗಿ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಕಟ್ಟಡ ಪೂಜೆ ಹಾಗೂ ಕಳಸಾರೋಹಣದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಜನರ ಬೇಡಿಕೆಗೇ ಮೊದಲ ಆದ್ಯತೆ ನೀಡಿದ್ದೇನೆ. ಜನ ಸಮೂಹದ ನಿರ್ಣಯಕ್ಕೆ ಎಂದೂ ಇಲ್ಲ ಎಂದಿಲ್ಲ. ಯಾವ ಊರನ್ನೂ, ಯಾವ ಕೆಲಸವನ್ನೂ ನಿರ್ಲಕ್ಷಿಸಿಲ್ಲ. ಧಾರ್ಮಿಕ, ಆದ್ಯಾತ್ಮಿಕ, ಕುಡಿಯುವ ನೀರು, ನೀರಾವರಿ, ಮೂಲಭೂತ ಸೌಲಭ್ಯ, ಶಿಕ್ಷಣ ಸೇರಿದಂತೆ ಎಲ್ಲ ಕೆಲಸವನ್ನೂ ಆದ್ಯತೆಯ ಮೇಲೆ ನಿಭಾಯಿಸುತ್ತಿದ್ದೇನೆ. ತನ್ಮೂಲಕ ಕ್ಷೇತ್ರವನ್ನು ಸರ್ವಾಂಗೀಣ ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
​ ಈ ಸಂದರ್ಭದಲ್ಲಿ ಮುತ್ನಾಳ ಕೇದಾರಪೀಠದ ಶ್ರೀ ಶಿವಾನಂದ ಶಿವಾಚಾರ್ಯ ಶ್ರೀಗಳು, ಗ್ರಾಮಸ್ಥರು, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button