Latest

ಕ್ಯಾಬಿನ್ ನಲ್ಲಿ ಕಾಣಿಸಿದ ಹೊಗೆ: ದೆಹಲಿಯಿಂದ ಜಬಲ್ ಪುರಕ್ಕೆ ಹೊರಟಿದ್ದ ವಿಮಾನ ತುರ್ತು ಭೂಸ್ಪರ್ಷ

ಪ್ರಗತಿವಾಹಿನಿ ಸುದ್ದಿ, ನವದೆಹಲಿ:  ದೆಹಲಿಯಿಂದ ಮಧ್ಯಪ್ರದೇಶದ ಜಬಲ್ ಪುರಕ್ಕೆ ಹೊರಟಿದ್ದ ವಿಮಾನದ  ಕ್ಯಾಬಿನ್ ನಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ಪ್ರಯಾಣ ಮೊಟಕುಗೊಳಿಸಿ  ದೆಹಲಿ ವಿಮಾನ ನಿಲ್ದಾಣದಲ್ಲೇ  ತುರ್ತು ಭೂಸ್ಪರ್ಷ ಮಾಡಲಾಗಿದೆ.

ಸ್ಪೈಸ್ ಜೆಟ್ ಎಸ್ ಜಿ- 2862 ವಿಮಾನ ಶನಿವಾರ ಬೆಳಿಗ್ಗೆ  6.15ರ ಸುಮಾರು ುಡ್ಡಯನ ಕೈಗೊಂಡಿತ್ತು. 5 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಅಕಸ್ಮಾತ್ ವಿಮಾನದೊಳಗೆ ಹೊಗೆ ಕಂಡ ಪ್ರಯಾಣಿಕರು ಮಾಹಿತಿ ನೀಡುತ್ತಿದ್ದಂತೆ ಗಮನಿಸಿದ ಪೈಲಟ್ ಗಳು ಪ್ರಯಾಣ ಮೊಟಕುಗೊಳಿಸಿ ದೆಹಲಿಗೆ ಮರಳುವ ನಿರ್ಧಾರ ಕೈಗೊಂಡರು.

7 ಗಂಟೆಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಯಿತು. ವಿಮಾನದಲ್ಲಿ ನಾಲ್ವರು ವೈಮಾನಿಕ ಸಿಬ್ಬಂದಿ, ಇಬ್ಬರು ಪೈಲಟ್ ಗಳು ಹಾಗೂ 185 ಪ್ರಯಾಣಿಕರಿದ್ದು ಎಲ್ಲರೂ ಸುರಕ್ಷಿತವಾಗಿದ್ದಾರೆ.

ಜಾಲತಾಣದಲ್ಲಿ ನೂಪುರ ಶರ್ಮಾ ಬೆಂಬಲಿಸಿದ ಮೆಡಿಕಲ್ ಶಾಪ್ ಮಾಲೀಕನ ಹತ್ಯೆ

Home add -Advt

Related Articles

Back to top button