Kannada NewsKarnataka NewsLatest

ಬೆಳಗಾವಿಯಲ್ಲಿ ಕಾರಿಗೆ ಕಲ್ಲೆಸೆದು ಗಾಜು ಒಡೆಯುತ್ತಿದ್ದ ವ್ಯಕ್ತಿ ಪೊಲೀಸ್ ಬಲೆಗೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಲ್ಲಿ ಕಾರಿಗೆ ಕಲ್ಲೆಸೆದು ಗಾಜುಗಳನ್ನು ಪುಡಿ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಾತ್ರಿ ವೇಳೆಯಲ್ಲಿ ಶಹಾಪುರ್ ಸರಾಫ್ ಗಲ್ಲಿ ಮತ್ತು ಕಚೇರಿ ಗಲ್ಲಿಯಲ್ಲಿ 4 ಕಾರುಗಳಿಗೆ ಕಲ್ಲಿನಿಂದ ಹೊಡೆದು ಕಾರಿನ ಗಾಜನ್ನು ಒಡೆದಿದ್ದ.

ಇದರಿಂದಾಗಿ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.

ಶಹಾಪುರ ಠಾಣೆ ಪೊಲೀಸ್ ತಂಡ ವ್ಯಕ್ತಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ಕೊಂಡಿದ್ದು, ವಿಚಾರಣೆ ಮುಂದುವರೆದಿದೆ ಎಂದು ಡಿಸಿಪಿ ವಿಕ್ರಂ ಅಮಟೆ ಟ್ವೀಟ್ ಮಾಡಿದ್ದಾರೆ.

Home add -Advt

 

https://twitter.com/DCP_LO_Belagavi/status/1460154938537824262?t=lGMRfB5L8Rej35q2kBCxmg&s=03

16 ವರ್ಷದ ಬಾಲಕಿಯ ಮೇಲೆ ಪೈಶಾಚಿಕ ಕೃತ್ಯ

Related Articles

Back to top button