Kannada NewsKarnataka NewsLatest

*ಲೋಕಸಭಾ ಅಭ್ಯರ್ಥಿ ಘೋಷಿಸಿದ ಪ್ರಹ್ಲಾದ ಜೋಶಿ*

ಪ್ರಗತಿವಾಹಿನಿ ಸುದ್ದಿ; ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ನಾನು ಈಗಾಗಲೇ ಚುನಾವಣಾ ತಯಾರಿ ಶುರು ಮಾಡಿದ್ದೇನೆ ಎಂದು ಕೇಂದ್ರ ಸಂಸದೀಯ ಸಚಿವ, ಸಚಿವ ಧಾರವಾಡ ಸಂಸದರು ಆಗಿರುವ ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಮಾದ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಧಾರವಾಡ ಲೋಕಸಭೆ ಕ್ಷೇತ್ರಕ್ಕೆ ನನಗೆ ಗೊತ್ತಿರುವ ಮಟ್ಟಿಗೆ ನಾನೇ ಅಭ್ಯರ್ಥಿ ಎಂಬುದು ಸ್ಪಷ್ಟವಿದೆ ಎಂದು ಎಲ್ಲಾ ಅಂತೆ-ಕಂತೆ ಗಳಿಗೆ ತೆರೆ ಎಳೆದರು.

Home add -Advt

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಯಾವುದೇ ಗೊಂದಲವಿಲ್ಲ. ಆದರೆ ಪಕ್ಷ ಅಭ್ಯರ್ಥಿಗಳ ಘೋಷಣೆ ಮಾಡುವ ಮುನ್ನ ನಾವು ಹಾಗೆಲ್ಲ ಹೇಳಬಾರದು. ಆದರೆ, ನನಗೆ ಯಾವುದೇ ಸಂಶಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಧಾರವಾಡ ಕ್ಷೇತ್ರದಲ್ಲಿ ಈಗಾಗಲೇ ನಮ್ಮೆಲ್ಲಾ ಶಾಸಕರು, ಮಾಜಿ ಶಾಸಕರು, ಕಾರ್ಯಕರ್ತರು ಚುನಾವಣೆ ಸಿದ್ಧತೆ ನಡೆಸಿದ್ದಾರೆ ಎಂದರು.

ರಾಷ್ಟ್ರಪತಿ ಆಗ್ತಾರೆ ಅಂದಿಲ್ಲವಲ್ಲ: ಜೋಶಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗುತ್ತಾರೆ ಎಂಬ ವದಂತಿ ಇದೆಯಲ್ಲಾ? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸದ್ಯ ರಾಷ್ಟ್ರಪತಿ ಆಗ್ತಾರೆ ಎಂದಿಲ್ಲವಲ್ಲ ಎಂದು ನಗೆ ಬೀರುತ್ತಾ ಇದೆಲ್ಲಾ ಅರ್ಥವಿಲ್ಲದ್ದು ಎಂದು ಹೇಳಿದರು.

Related Articles

Back to top button