Latest

ಧಾರವಾಡ ಅಪಘಾತ: ಸಾವಿನ ಸಂಖ್ಯೆ 13; ಮೋದಿ ಸಂತಾಪ

ಪ್ರಗತಿವಾಹಿನಿ ಸುದ್ದಿ, ನವದೆಹಲಿ / ಧಾರವಾಡ – ಧಾರವಾಡದಲ್ಲಿ ಇಂದು ಬೆಳಗಿನಜಾವ ಸಂಭವಿಸಿದ ಅಪಘಾತದಲ್ಲಿ ಸಾವಿಗೀಡಾದವರ ಸಂಖ್ಯೆ 13ಕ್ಕೇರಿದೆ.

ದಾವಣಗೆರೆಯ 11 ಮಹಿಳೆಯರು ಹಾಗೂ ವಾಹನದ ಚಾಲಕ ಮತ್ತು ಕ್ಲೀನರ್ ಮೃತರಾಗಿದ್ದಾರೆ. ದಾವಣಗೆರೆಯ ಲೇಡೀಸ್ ಕ್ಲಬ್ ಸದಸ್ಯೆಯರು ಗೋವಾ ಪ್ರವಾಸಕ್ಕೆ ತೆರಳುವ ವೇಳೆ ಟೆಂಪೊ ಮತ್ತು ಟಿಪ್ಪರ್ ಮಧ್ಯೆ ಅಪಘಾತ ಸಂಭವಿಸಿದೆ. ಇನ್ನೂ ನಾಲ್ವರು ಗಾಯಗೊಂಡಿದ್ದಾರೆ.

ಘಟನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ದಿಘ್ಭ್ರಮೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.

ಧಾರವಾಡ ಬಳಿ ಭೀಕರ ಅಪಘಾತ: 10 ಮಹಿಳೆಯರ ದುರ್ಮರಣ

Home add -Advt

ಗೋವಾಕ್ಕೆ ಪ್ರವಾಸ ಹೊರಟಿದ್ದ ಮಹಿಳೆಯರ ಧಾರುಣ ಸಾವು

Related Articles

Back to top button