Karnataka News

*ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ*

ಪ್ರಗತಿವಾಹಿನಿ ಸುದ್ದಿ: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬಿಜಿಎಸ್ ಲೇಔಟ್ ನ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದಿದೆ.

ಲೋಕನಾಥ್ ಸಿಂಗ್ (37) ಕೊಲೆಯಾಗಿರುವ ರಿಯಲ್ ಎಸ್ಟೇಟ್ ಉದ್ಯಮಿ. ಲೋಕನಾಥ್ ಸಿಂಗ್ ಅವರ ಮದುವೆ ನಿಶ್ಚಿಯವಗೈತ್ತು. ಮದುವೆಗೆ ಸಿದ್ಧತೆಯಲ್ಲಿದ್ದ ಲೋಕನಾಥ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಚಾಕುವಿನಿಂದ ಕುತ್ತಿಗೆ ಭಾಗಕ್ಕೆ ಇರಿಯಲಾಗಿದ್ದು, ಸ್ಥಳದಲ್ಲೇ ಲೋಕನಾಥ್ ಸಾವನ್ನಪ್ಪಿದ್ದಾರೆ.

ಲೋಕನಾಥ್ ಗನ್ ಮ್ಯಾನ್ ನಾಪತ್ತೆಯಾಗಿದ್ದ. ಈಗ ಏಕಾಏಕಿ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷನಾಗಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

Home add -Advt

Related Articles

Back to top button