Latest

ರಮೇಶ ಜಾರಕಿಹೊಳಿ ಪತ್ರಿಕಾಗೋಷ್ಠಿ ಕುತೂಹಲ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಪತ್ರಿಕಾಗೋಷ್ಠಿ ಕರೆದಿದ್ದು, ಎಲ್ಲರ ಕುತೂಹಲ ನೆಟ್ಟಿದೆ.

ಸಂಜೆ 4 ಗಂಟೆಗೆ ಅವರು ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು. ಆದರೆ ಹೊರಗಡೆ ಹೋಗಿದ್ದ ರಮೇಶ ಜಾರಕಿಹೊಳಿ 5 ಗಂಟೆ ಹೊತ್ತಿಗೆ ಮನೆಗೆ ಆಗಮಿಸಿದ್ದಾರೆ. ಹಾಗಾಗಿ ಸಂಜೆ 6 ಗಂಟೆಗೆ ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆ ಇದೆ.

Home add -Advt

ನನ್ನ ಬಳಿ ನಿಮಗೇ ಶಾಕ್ ಆಗುವಂತ ಸಾಕ್ಷಿ ಇದೆ. ನಾಳೆಯಿಂದ ನಮ್ಮ ಆಟ ಶುರು. ಶನಿವಾರ ಸಂಜೆ 4 ಗಂಟೆಯಿಂದ 6 ಗಂಟೆಯೊಳಗೆ ಬಾಂಬ್ ಸಿಡಿಸುತ್ತೇನೆ ಎಂದು ನಿನ್ನೆ ಘೋಷಿಸಿದ್ದ ರಮೇಶ ಜಾರಕಿಹೊಳಿ ಇಂದು ಅದಕ್ಕಾಗಿಯೇ ಪತ್ರಿಕಾಗೋಷ್ಠಿ ಕರೆದಿದ್ದಾರೆ.

ಇನ್ನು ಕೆಲವೇ ಕ್ಷಣಗಳಲ್ಲಿ ಪತ್ರಿಕಾಗೋಷ್ಠಿ ಆರಂಭವಾಗುವ ನಿರೀಕ್ಷೆ ಇದೆ. ಎಲ್ಲರ ಕಣ್ಣು ಅದರತ್ತ ನೆಟ್ಟಿದೆ.

ಇದೇ ವೇಳೆ ಸಿಡಿಯಲ್ಲಿರುವ ಯುವತಿಯ ಪೋಷಕರು ಎಸ್ಐಟಿ ಮುಂದೆ ಇಂದು ಬೆಳಗ್ಗೆಯೇ ಹಾಜರಾಗಿದ್ದು ಅವರ ವಿಚಾರಣೆ ಈಗಷ್ಟೆ ಮುಕ್ತಾಯವಾಗಿದೆ.

ನಾಳೆ 4ರಿಂದ 6 ಗಂಟೆವರೆಗೂ ‘ಮಹಾ’ ಬಾಂಬ್ ಇದೆ ಎಂದ ರಮೇಶ್ ಜಾರಕಿಹೊಳಿ

ಎಸ್ ಐಟಿ ಮುಂದೆ ಹಾಜರಾದ ಯುವತಿ ಪೋಷಕರು

 

 

Related Articles

Back to top button