
ಪ್ರಗತಿವಾಹಿನಿ ಸುದ್ದಿ, ಅಥಣಿ:
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಹೇಶ್ ಕುಮಟಳ್ಳಿ ವಿರುದ್ಧ ಅಥಣಿಯಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಕುಮಟಳ್ಳಿ ಫೋಟೊ ಹಾಕಿ ಆರ್ ಐಪಿ ಎಂದೆಲ್ಲ ಹಾಕಲಾಗುತ್ತಿದೆ.
ಮಾಜಿ ಸಚಿವ, ಬಿಜೆಪಿಯ ಲಕ್ಷ್ಮಣ ಸವದಿ ಸಹ ಕಿಡಿಕಾರಿದ್ದು, ರಾಜಿನಾಮೆ ನೀಡಲು ಕಾರಣ ಏನಿತ್ತು ಎಂದು ಪ್ರಶ್ನಿಸಿದ್ದಾರೆ.