CrimeKannada NewsKarnataka NewsLatestTravel

*ಚಲಿಸುತ್ತಿದ್ದ ಬಸ್ ನಿಂದ ಉಗಳಲು ಯತ್ನಿಸಿದ ವ್ಯಕ್ತಿಯ ರುಂಡ್ ಕಟ್*

ಪ್ರಗತಿವಾಹಿನಿ ಸುದ್ದಿ: ಚಲಿಸುತ್ತಿದ್ದ ಬಸ್ ನಿಂದ ಉಗಳಲು ಯತ್ನಿಸಿದ ವ್ಯಕ್ತಿಯ ರುಂಡ್ ಕಟ್ ಆಗಿರುವ ಆಘಾತಕಾರಿ ಘಟನೆ ನಡೆದಿದೆ.

ಹುಬ್ಬಳ್ಳಿಯಿಂದ ಶೆರೆವಾಡ ಕಡೆಗೆ ಸಾಗುತ್ತಿದ್ದ ಬಸ್‌ನಲ್ಲಿ ಈ ಘಟನೆ ಸಂಭವಿಸಿದೆ. ವ್ಯಕ್ತಿ ಕಿಟಕಿಯಿಂದ ತಲೆ ಹೊರಹಾಕಿ ಉಗುಳಲು ಯತ್ನಿಸಿದ್ದಾಗ, ಹಿಂದಿನಿಂದ ಅತಿ ವೇಗವಾಗಿ ಬಂದ ಮತ್ತೊಂದು ಬಸ್ ಪಕ್ಕದಲ್ಲೇ ಹಾದು ಹೋಗಿದೆ. ಈ ವೇಳೆ, ಬಸ್‌ನ ಕಿಟಕಿಯಿಂದ ಹೊರಗಿದ್ದ ಆತನ ರುಂಡ ಕಟ್ ಆಗಿದೆ. ಮೃತದೇಹವು ಪ್ರಯಾಣಿಸುತ್ತಿದ್ದ ಬಸ್‌ನಲ್ಲೇ ಉಳಿದಿದ್ದರೆ, ರುಂಡ ಡಿಕ್ಕಿ ಹೊಡೆದ ಇನ್ನೊಂದು ಬಸ್‌ನಲ್ಲಿ ಸಿಕ್ಕಿಹಾಕಿಕೊಂಡಿದೆ ಎಂದು ತಿಳಿದುಬಂದಿದೆ.

ಈ ಘಟನೆ ಗಮನಿಸಿದ ಬಸ್ ಚಾಲಕರು ತಕ್ಷಣ ವಾಹನ ನಿಲ್ಲಿಸಿ ಸಂಬಂಧಪಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Home add -Advt

Related Articles

Back to top button