Belagavi NewsBelgaum NewsKannada NewsKarnataka NewsLatest

*ಜ್ಯೋತಿ ವಿವಿಧೋದ್ದೇಶಕ್ಕೆ 1.72 ಕೋಟಿ ರೂ. ಲಾಭ: ಅಣ್ಣಾಸಾಹೇಬ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ಎಕ್ಸಂಬಾದ ಜ್ಯೋತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ೨೦೨೪-೨೫ನೇ ಹಣಕಾಸು ವರ್ಷದಲ್ಲಿ ೧.೭೨ ಕೋಟಿ ರೂ. ಲಾಭ ಗಳಿಸಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಸ್ಥಳೀಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಯಕ್ಷೇತ್ರದಲ್ಲಿ ಭಾನುವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಆರ್ಥಿಕ ವರ್ಷದ ಕೊನೆಗೆ ೪೩ ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ. ಶೇರು ಬಂಡವಾಳ ೨.೩೯ ಕೋಟಿ ರೂ. ಇದೆ. ೧೦.೪೮ ಕೋಟಿ ರೂ. ಮೀಸಲು ಹಾಗೂ ಇತರೆ ನಿಧಿಗಳ ರೂಪದಲ್ಲಿ ಕಾಯ್ದಿರಿಸಲಾಗಿದೆ.

ಸಂಸ್ಥೆಯು ೩೩೧.೮೩ ಕೋಟಿ ರೂ. ಠೇವಣಿ ಹೊಂದಿದೆ. ೧೬೩.೮೫ ಕೋಟಿ ರೂ. ಸಾಲ ನೀಡಲಾಗಿದೆ. ೧೩೦.೦೯ ಕೋಟಿ ರೂ. ವಿವಿಧೆಡೆ ಗುಂತಾಯಿಸಲಾಗಿದೆ. ದುಡಿಯುವ ಬಂಡವಾಳ ೩೪೪.೭೦ ಕೋಟಿ ರೂ. ಇದೆ. ಸಹಕಾರಿಯಲ್ಲಿ ೨೯.೮೯ ಕೋಟಿ ರೂ.ಗಳ ವಸ್ತುಗಳನ್ನು ಖರೀದಿಸಲಾಗಿದ್ದು ೩೩.೫೩ ಕೋಟಿ ರೂ.ಗಳ ಮಾರಾಟವಾಗಿದೆ. ಕೇವಲ ಐದು ವರ್ಷಗಳಲ್ಲಿ ಸಂಸ್ಥೆಯ ಪ್ರಗತಿ ಆಕಾಶದೆತ್ತರಕ್ಕೇರುತ್ತಿದೆ. ಮುಂಬರುವ ದಿನಗಳಲ್ಲಿ ಶಾಖೆಗಳನ್ನು ಹೆಚ್ಚಿಸಲಾಗುವುದು ಎಂದರು.
ಸಹಕಾರಿಯ ಅಧ್ಯಕ್ಷ ಬಾಬುರಾವ ಮಾಳಿ ಮಾತನಾಡಿ ಮಾಜಿ ಸಂಸದ ಜೊಲ್ಲೆಯವರ ಮಾರ್ಗದರ್ಶನದಲ್ಲಿ ಸಂಸ್ಥೆಯು ೮೧ ಶಾಖೆಗಳನ್ನು, ೧೮ ಬಜಾರ್(ಮಾಲ್)ಗಳನ್ನು, ೬೩ ಕ್ರೆಡಿಟ್ ಶಾಖೆಗಳನ್ನು ಹೊಂದಿದೆ. ಬಜಾರ್(ಮಾಲ್), ಮೆಡಿಕಲ್, ಎಕ್ಟ್ರಿಕಲ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಂಸ್ಥೆ ಕಾರ್ಯ ಮಾಡುತ್ತಿದೆ. ಹೆಸರಿಸಲಾದ ಕಂಪೆನಿಗಳ ಉತ್ಪನ್ನಗಳನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಗಟು ಮತ್ತು ಚಿಲ್ಲರೆ ದರದಲ್ಲಿ ಸರಬರಾಜು ಮಾಡಲಾಗುತ್ತಿದೆ. ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ವಿಶ್ವನಾಥ ಪೇಟಕರ, ನಿರ್ದೇಶಕ ಜಗದೀಶ ಹಿಂಗ್ಲಜೆ, ಜಗದೀಶ ಜಾಧವ, ರಾವಸಾಬ ಬಾಕಳೆ, ಪವನ ಪಾಟೀಲ, ಅಮೃತ ಖೋತ, ಬಾಳಾಸಾಬ ಶಿಂಧೆ, ಸವಿತಾ ಉಂದುರೆ, ಕಲ್ಲಪ್ಪ ಪೂಜಾರಿ, ಆನಂದ ಗಿಡ್ಡ, ಲಕ್ಷ್ಮಣ ಪ್ರಭಾತ, ಕಲ್ಲಪ್ಪ ನಾಯಕ, ಮೊದಲಾದವರು ಉಪಸ್ಥಿತರಿದ್ದರು.

Home add -Advt

Related Articles

Back to top button