Kannada NewsKarnataka NewsLatestPolitics

*ಗೃಹ ಸಚಿವ ಪ್ರಿಯಾಂಕ್ ಖರ್ಗೆ ಗೆ ಮತ್ತೆ ಸಮನ್ಸ್ ಜಾರಿ*

ಬೆಂಗಳೂರು: ಆರ್‌.ಎಸ್‌.ಎಸ್ ವಿರುದ್ಧ ಅವರಹೇಳನಕಾರಿ ಹೇಳಿಕೆ, ಪೋಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಮೊಹಮ್ಮದ್ ನಲಪಾಡ್ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮತ್ತೆ ಸಮನ್ಸ್ ಜಾರಿ ಮಾಡಿದೆ.

Home add -Advt

ಆರ್‌.ಎಸ್‌.ಎಸ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಆರೋಪ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, ಇಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಮಹಮ್ಮದ್ ನಲಪಾಡ್ ಖುದ್ದು ಹಾಜರಾತಿಗೆ ಕೋರ್ಟ್ ಸೂಚಿಸಿತ್ತು. ಆದರೆ ಇವರ ಬದಲಾಗಿ ಸದಾಶಿವನಗರ ಪೊಲೀಸರು, ಅಶೋಕ್ ನಗರ ಪೊಲೀಸರು ಹಾಜರಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ ಮಾಡಿದ್ದರು.

ವರದಿ ಪರಿಶೀಲನೆ ನಡೆಸಿದ ನ್ಯಾಯಾಧೀಶರು ವರದಿ ತೃಪ್ತಿಕರವಾಗಿಲ್ಲ ಪೊಲೀಸರು ವಿಫಲರಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಪ್ರಿಯಾಂಕ್ ಖರ್ಗೆ, ಮಹಮ್ಮದ್ ನಲಪಾಡ್ ಮತ್ತೆ ಆಗಸ್ಟ್ 1ರಂದು ಕೋರ್ಟ್‌ಗೆ ಹಾಜರಾಗುವಂತೆ ಮರು ಸಮನ್ಸ್ ಜಾರಿ ಮಾಡಿ ಆದೇಶ ಹೊರಡಿಸಿದೆ.

Related Articles

Back to top button