Latest

ತೋಟದ ಮನೆಯಲ್ಲೇ ಎಸ್.ಆರ್.ವಿಶ್ವನಾಥ್ ಹತ್ಯೆಗೆ ಸ್ಕೆಚ್; ಸಂಚುಕೋರರ ಸ್ಫೋಟಕ ಸಂಭಾಷಣೆ ಬಹಿರಂಗ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಜೆಪಿ ಶಾಸಕ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹತ್ಯೆಗೆ ಕಾಂಗ್ರೆಸ್ ಮುಖಂಡ ಎಂ.ಎನ್. ಗೋಪಾಲಕೃಷ್ಣ ಸಂಚು ರೂಪಿಸಿದ್ದರು ಎನ್ನಲಾದ ವಿಡಿಯೋ ವೈರಲ್ ಆಗಿದ್ದು, ಹತ್ಯೆ ಸಂಚುಕೋರರು ನಡೆಸಿದ್ದ ಯೋಜನೆ ಬಹಿರಂಗವಾಗಿದೆ.

ಗೋಪಾಲಕೃಷ್ಣ ತಮ್ಮ ಮನೆಯಲ್ಲಿಯೇ ಕುಳ್ಳದೇವರಾಜ್ ನನ್ನು ಕರೆಸಿಕೊಂಡು ಎಸ್.ಆರ್.ವಿಶ್ವನಾಥ್ ಹತ್ಯೆಗೆ ಹೇಗೆ ಸಂಚು ರೂಪಿಸಬೇಕೆಂದು ಪ್ಲಾನ್ ಮಾಡಿದ್ದರು. ತೋಟದ ಮನೆಯಲ್ಲಿಯೇ ಹತ್ಯೆಗೆ ಪ್ಲಾನ್ ನಡೆದಿತ್ತು. ಗೋಪಾಲಕೃಷ್ಣ-ಕುಳ್ಳ ದೇವರಾಜ್ ನಡುವಿನ ಸಂಭಾಷಣೆಯ ಆಡಿಯೋ-ವಿಡಿಯೋ ಬಹಿರಂಗವಾಗಿದೆ.

ಎಸ್.ಆರ್.ವಿಶ್ವನಾಥ್ ತೋಟದ ಮನೆಗೆ ಬರುತ್ತಾನೆ. ಬೆಳಿಗ್ಗೆ 6-7:30ರವರೆಗೆ ಒಬ್ಬನೇ ಇರ್ತಾನೆ. ಮೊದಲು ಒಂದೆರಡು ದಿನ ವಾತಾವರಣ ನೋಡಬೇಕು. ಆ ನಂತರ ಮುಗಿಸಬೇಕು ಎಂದು ಗೋಪಾಲಕೃಷ್ಣ, ದೇವರಾಜ್ ಗೆ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ದೇವರಾಜ್ ಈಗಾಗಲೇ 2 ಪಲ್ಸರ್ ಬೈಕ್ ನಲ್ಲಿ ಜನರನ್ನು ಕಳಿಸಿದ್ದೇನೆ. ಪಾಂಡಿಚೇರಿ ಮೂಲದವರು. ಅವರನ್ನು ನಿಭಾಯಿಸೋಕೆ ಪ್ರತಿದಿನ 5 ಸಾವಿರ ಹಣ ಬೇಕು. ಹಣ ಕೊಡಿ ಎಂದಿದ್ದಾನೆ. ಅವರಿಗೆ ಎಲ್ಲಾ ವಿಷಯ ಹೇಳಿದ್ದೀಯಾ? ಎಂದು ಗೋಪಾಲಕೃಷ್ನ ಕೇಳಿದ್ದಾರೆ. ಅವರಿಗೆ ಎಂಎಲ್ ಎ ಅಂತಾ ಗೊತ್ತಿಲ್ಲ. ಯಾರೋ ರೀಯಲ್ ಎಸ್ಟೇಟ್ ನವನು ಅಂತ ಹೇಳಿದ್ದೇನೆ ಎಂದಿದ್ದಾನೆ… ಯಾರಿಗೂ ಗೊತ್ತಾಗದಂತೆ ಕೆಲಸ ಮುಗೀಬೇಕು ಎಂದು ಗೋಪಾಲಕೃಷ್ಣ ಹೇಳಿದ್ದಾರೆ. ಒಟ್ಟಿನಲ್ಲಿ ತೋಟದ ಮನೆಯಲ್ಲಿಯೇ ಎಸ್.ಆರ್.ವಿಶ್ವನಾಥ್ ಹತ್ಯೆಗೆ ಮೆಗಾ ಪ್ಲಾನ್ ನಡೆದಿತ್ತು ಎಂಬ ವಿಡಿಯೋ ವೈರಲ್ ಆಗಿದೆ.

ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಹತ್ಯೆಗೆ ಸ್ಕೆಚ್; ಕಾಂಗ್ರೆಸ್ ಮುಖಂಡ ಸೇರಿ ಇಬ್ಬರು ಪೊಲೀಸ್ ವಶಕ್ಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button