
ಪ್ರಗತಿವಾಹಿನಿ ಸುದ್ದಿ: ಬಸ್ ಇಳಿದು ನಿಂತಿದ್ದ ಪುಟ್ಟ ಬಾಲಕಿ ಮೇಲೇಯೇ ಶಾಲಾ ಬಸ್ ಹರಿದು ಹೋಗಿರುವ ಘಟನೆ ಬೀದರ್ ನಲ್ಲಿ ನಡೆದಿದೆ.
ಬೀದರ್ ತಾಲೂಕಿನ ಜನವಾಡ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. 8 ವರ್ಷದ ರುತ್ವಿ ಮೃತ ಬಾಲಕಿ. ಗುರುನಾನಕ್ ಪಬ್ಲಿಕ್ ಸ್ಕೂಲ್ ನಲ್ಲಿ ಓದುತ್ತಿದ್ದಳು.
ಶಾಲೆ ಬಸ್ ಇಳಿದು ಕೆಳಗೆ ನಿಂತಿದ್ದನ್ನು ಗಮನಿಸದ ಬಸ್ ಚಾಲಕ ಬಸ್ ಮುಂದೆ ಚಲಾಯಿಸಿದ್ದಾನೆ. ಬಸ್ ನ ಹಿಂಬದಿ ಚಕ್ರಕ್ಕೆ ಸಿಲುಕಿ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಘಟನಾ ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.



