Belagavi NewsBelgaum News

*ಉಕ್ಕಿ ಹರಿಯುತ್ತಿರುವ ಚರಂಡಿಯಲ್ಲಿ ಕೊಚ್ಚಿ ಹೊದ ವ್ಯಕ್ತಿಗಾಗಿ ಹುಡುಕಾಟ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಂಗಳವಾರ ತಡರಾತ್ರಿವರೆಗು ಸುರಿದ ಭಾರಿ ಮಳೆಯಿಂದ ಹಲವಾರು ಅವಾಂತರಗಳು ಸೃಷ್ಟಿಯಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ ನಗರದಲ್ಲಿ ಮಳೆಯಿಂದ ಉಕ್ಕಿ ಹರಿಯುತ್ತಿರುವ ಚರಂಡಿಯಲ್ಲಿ ವ್ಯಕ್ತಿ ಓರ್ವ ಕೊಚ್ಚಿಹೋಗಿದ್ದು, ಇನ್ನೂವರೆಗೆ ಪತ್ತೆಯಾಗಿಲ್ಲ.

ಗೋಕಾಕ್ ನಗರದ ಗೊಲ್ಲರ ಓಣಿ ನಿವಾಸಿ ಕಾಶಪ್ಪ ಶಿರಟ್ಟಿ (52) ಕಾಲು ಜಾರಿ ಉಕ್ಕಿ ಹರಿಯುತ್ತಿರುವ ಚರಂಡಿಯಲ್ಲಿ ಬಿದ್ದಿದ್ದಾನೆ. ಆತನಿಗಾಗಿ ನಗರಸಭೆ ಅಧಿಕಾರಿಗಳ ಹುಡುಕಾಟ ನಡೆಸಿದ್ದಾರೆ. 

Home add -Advt

ನಗರ ಸಭೆ ಅಧಿಕಾರಿಗಳಿಗೆ ಗೋಕಾಕ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸಾಥ್ ನೀಡಿದ್ದಾರೆ. ನಗರಸಭೆ ಅಧಿಕಾರಿಗಳು ಜೆಸಿಬಿಯಿಂದ ಪುಟ್ ಪಾತ್ ತೆರವುಗೊಳಿಸುತ್ತಿದ್ದಾರೆ. ಗೋಕಾಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Back to top button