Kannada NewsKarnataka NewsLatest

ನಿಧಿ ಅರ್ಪಿಸಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ನೀಡಿದ ಶ್ರೀಗಳು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಅರಳಿಕಟ್ಟಿ ಗ್ರಾಮದ ವಿರಕ್ತಮಠದ ಶ್ರೀ  ಶಿವಮೂರ್ತಿ ಸ್ವಾಮೀಜಿಗಳು ಶ್ರೀ ರಾಮ ಜನ್ಮ ಭೂಮಿ ನಿಧಿ ಸಮರ್ಪಣಾ ಅಭಿಯಾನವನ್ನು ಸ್ವತಃ  ತಮ್ಮ ಮಠದಿಂದ ನಿಧಿ ಸಮರ್ಪಿಸುವ ಮೂಲಕ ಚಾಲನೆ ನೀಡಿದರು.

ಪ್ರತಿ ಊರು, ಪ್ರತಿ ಗ್ರಾಮದಲ್ಲಿ ಈ ಅಭಿಯಾನದ ಮುಖಾಂತರ  ಲಕ್ಷಾವದಿ ಜನರು ದೇಶದ ಸಂಸ್ಕೃತಿ ಉಳಿಸಿ ಬೆಳೆಸಿ ಭಾರತ ಮಾತೆ ವಿಶ್ವ ಗುರುವಾಗಲು ಸಹಕಾರಿಯಾಗಲಿ ಎಂದು ಆಶೀರ್ವಾದಿಸಿದರು.

ವಿಶ್ವ ಹಿಂದು ಪರಿಷತ್  ಕೋಶಾಧ್ಯಕ್ಷ ಕೃಷ್ಣ ಭಟ್  ಮಾತನಾಡುತ್ತ, ನಮ್ಮ ಶಕ್ತಿ ಇರುವುದೇ ಗ್ರಾಮೀಣ ಶ್ರಮ ಜೀವಿ ರೈತರು, ಮಾತೆಯರಲ್ಲಿ.  ಇವರೆಲ್ಲರ ಸಮರ್ಪಣೆ ಎಂದರೆ ದೇಶದ ಏಕತೆಯ ಸಂಕೇತ. ರಾಮ ಮಂದಿರದ ಈ ಮೂಲಕ ರಾಷ್ಟ್ರ ಮಂದಿರ ಆಗುವ ಮೂಲಕ ಇಡೀ ಜಗತ್ತಿಗೆ ಒಂದು ಐಕ್ಯತೆಯ ಸಂದೇಶ ಸಾರುವ ಇತಿಹಾಸ ನಿರ್ಮಿಸೋಣ ಎಂದು ಕರೆ ಕೊಟ್ಟರು.

ಬಾವಕಣ್ಣ ಲೋಹಾರ ಬಜರಂಗದಳದ ಜಿಲ್ಲಾ ಸಂಯೋಜಕ, ಮಂಜು ಪಾಟೀಲ, ರಾಮನಗೌಡಾ ಪಾಟೀಲ , ರವಿಪಾರ್ವತಿ, ಊರಿನ ಹಿರಿಯರು, ತಾಯಂದಿರು ಉಪಸ್ಥಿತರಿದ್ದರು.  ಶ್ರೀ ರಾಮನ ಪೂಜೆಯೊಂದಿಗೆ ರಾಮ ಮಂದಿರ ನಿರ್ಮಾಣಕ್ಕೆ ತಮ್ಮ ನಿಧಿ ಸಮರ್ಪಿಸಿ ಊರಿನ ಎಲ್ಲಾ ಓಣಿ ಸಂಪರ್ಕ ಮಾಡಲು ಪ್ರಾರಂಭಿಸಿದರು.

Home add -Advt

Related Articles

Back to top button