Kannada NewsKarnataka NewsLatest

*ನಮಗೆ ಮರಿಸ್ವಾಮಿಯೇ ಅನ್ನದಾತ: ಡಿಸೆಂಬರ್ ನಲ್ಲಿ ಹೊಸ ಮನೆ ಗೃಹ ಪ್ರವೇಶ ಎಂದ ಸಿಎಂ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ: ಡಿಸೆಂಬರ್ ನಲ್ಲಿ ಹೊಸ ಮನೆ ಗೃಹ ಪ್ರವೇಶ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈಗಿರುವುದು ನಮ್ಮ ಮನೆಯಲ್ಲ. ಮರಿಸ್ವಾಮಿ ಅವರದ್ದು. ನನಗೆ ನನ್ನ ಮಗನಿಗೆ ಮರಿಸ್ವಾಮಿಯೇ ಅನ್ನದಾತ. ನಾನು, ನನ್ನ ಸ್ನೇಹಿತರು, ಮಗ ಬಂದಾಗ ಊಟ ಹಾಕುವುದು ಮರಿಸ್ವಾಮಿ. ಈಗ ನಾವಿರುವುದು ಮರಿಸ್ವಾಮಿಯವರ ಮನೆ. ನನ್ನ ಮನೆಯಲ್ಲ. ನಮ್ಮ ಹೊಸ ಮನೆ ಆಗುತ್ತಿದೆ ಎಂದರು.

Home add -Advt

ಡಿಸೆಂಬರ್ ನಲ್ಲಿ ಹೊಸ ಮನೆ ಗೃಹ ಪ್ರವೇಶ ಮಾಡುತ್ತೇನೆ. ಗೃಹ ಪ್ರವೇಶದ ಬಳಿಕ ಹೊಸ ಮನೆಗೆ ಶಿಫ್ಟ್ ಆಗುತ್ತೇವೆ. ಈ ಮನೆ ಖಾಲಿ ಇಟ್ಟರೆ ಜನರ ಭೇಟಿಗೆ ಬಳಸಿಕೊಳ್ಳುತ್ತೇನೆ ಎಂದು ಹೇಳಿದರು.

Related Articles

Back to top button