Latest

ಟೀಕೆಗಳಿಗೆ ಒಂದೇ ಟ್ವೀಟಲ್ಲಿ ಉತ್ತರಿಸಿದ ಸಿದ್ದರಾಮಯ್ಯ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಹೊಸ ಸರಕಾರ ರಚನೆಯಾಗಿ ಸಿಎಂ, ಡಿಸಿಎಂ ಯಾರೆಂಬುದನ್ನೂ ಕಾಂಗ್ರೆಸ್ ಹೈಕಮಾಂಡ್ ಘೋಷಣೆ ಮಾಡಿ ಆಗಿದೆ. ಇದರ ಬೆನ್ನಲ್ಲೇ ಸಿಎಂ ಪಟ್ಟದ ಗ್ಯಾರಂಟಿಯೇ ಇಲ್ಲ, ಇನ್ನು ಉಳಿದ ಗ್ಯಾರಂಟಿಗಳನ್ನು ಹೇಗೆ ಪೂರೈಸುತ್ತಾರೆ ಎಂಬ ಸಾಮಾಜಿಕ ಜಾಲತಾಣದಲ್ಲಿನ ಟೀಕೆಗಳಿಗೆ ಹೊಸ ಸಿಎಂ ಆಗಿ ಘೋಷಣೆಯಾದ ಸಿದ್ದರಾಮಯ್ಯ ಒಂದೇ ಟ್ವೀಟಲ್ಲಿ ಉತ್ತರಿಸಿದ್ದಾರೆ.

“ಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿದೆ. ಜನಪರ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಜೊತೆಗೆ ನಮ್ಮ ಎಲ್ಲಾ ಗ್ಯಾರೆಂಟಿಗಳನ್ನು ಈಡೇರಿಸಲು ಕಾಂಗ್ರೆಸ್ ಪಕ್ಷ ಒಂದು ಕುಟುಂಬವಾಗಿ ಕೆಲಸ ಮಾಡಲಿದೆ” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

200 ಯುನಿಟ್ ವಿದ್ಯುತ್ ಉಚಿತ ಗ್ಯಾರಂಟಿ ಈಗಾಗಲೇ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಉಚಿತ ವಿದ್ಯುತ್ ನೀಡುವುದಾಗಿ ಹೇಳಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಈ ತಿಂಗಳಿಂದ ಕರೆಂಟ್ ಬಿಲ್ ಕಟ್ಟುವುದಿಲ್ಲ ಎಂಬ ಆಕ್ಷೇಪಗಳು ಹಲವೆಡೆ ವ್ಯಕ್ತವಾಗುತ್ತಿವೆ. ಗ್ಯಾರಂಟಿಗೆ ಬೇಕಾದ ಹಣಕಾಸನ್ನು ಕಾಂಗ್ರೆಸ್ ಅದೆಲ್ಲಿಂದ ಕ್ರೋಢೀಕರಿಸುತ್ತದೆಯೋ ನೋಡೋಣವೆಂಬ ಪ್ರತಿಪಕ್ಷಗಳ ವಾಗ್ದಾಳಿಯೂ ಇದರ ಬೆನ್ನಿಗೇ ಕೇಳಿ ಬರುತ್ತಿದೆ.

ಇವೆಲ್ಲದಕ್ಕೂ ಸಿದ್ದರಾಮಯ್ಯ ಟ್ವೀಟ್ ಉತ್ತರವಾಗಿದ್ದು ಏನೇ ಆದರೂ ಗ್ಯಾರಂಟಿ ನಿಭಾಯಿಸುವ ಅಭಯ ನೀಡಿದಂತಿದೆ.

Home add -Advt

https://pragati.taskdun.com/24th-vtu-inter-collegiate-state-level-athletic-meet-2022-23/

https://pragati.taskdun.com/chinis-boatsinkhindumahasagaraindiahelpresque/

https://pragati.taskdun.com/on-saturday-at-12-30-pm-cm-dcm-will-take-oath-with-many-ministers-only-one-dcm/

Related Articles

Back to top button