Belagavi NewsBelgaum NewsKannada NewsKarnataka NewsLife Style

*13 ವರ್ಷಗಳ ನಂತರ ಮೇ 6ರಿಂದ  ಬಸರಖೋಡ ಗ್ರಾಮದೇವಿಯ ಜಾತ್ರೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚನ್ನಮ್ಮನ ಕಿತ್ತೂರು ತಾಲೂಕಿನ ಬಸರಕೋಡ ಗ್ರಾಮದಲ್ಲಿ 13 ವರ್ಷಗಳ ನಂತರ ಮೇ 6 ರಿಂದ ಗ್ರಾಮದೇವಿ ಹಾಗೂ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ನಡೆಯಲಿದೆ. 

6 ರಂದು ಜಾತ್ರಾ ಮಹೋತ್ಸವಕ್ಕೆ ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಚಾಲನೆ ನೀಡುವರು. ದೇಶನೂರ ಕಲ್ಮಠದ ಶ್ರೀ ಮಡಿವಾಳ ರಾಜಯೋಗೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಪ್ರಾತಃಕಾಲದಲ್ಲಿ ದೇವಿಯರನ್ನು ಬರಮಾಡಿಕೊಳ್ಳುವುದು, ಪ್ರಾಣ ಪ್ರತಿಷ್ಠಾಪನೆ, ಉಡಿ ತುಂಬುವುದು ಹಾಗೂ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ಜರುಗಲಿವೆ. ಮೇ 10ರ ವರೆಗೆ ಪ್ರತಿದಿನ ಮುಂಜಾನೆ 9 ಹಾಗೂ ಸಾಯಂಕಾಲ 4 ಗಂಟೆಯಿಂದ ದೇವಿಯರ ಹೊನ್ನಾಟ ನಡೆಯಲಿದ್ದು, 6ರಂದು ಸಾಯಂಕಾಲ 4 ಗಂಟೆಗೆ ಶ್ರೀ ವೀರೇಶ್ವರ ಸ್ವಾಮೀಜಿ ಚಾಲನೆ ನೀಡುವರು.

ಮೇ 6ರಿಂದ 10ರ ವರೆಗೆ ಪ್ರತಿದಿನ ಸಾಯಂಕಾಲ 7 ಗಂಟೆಯಿಂದ ನಿಚ್ಚಣಕಿ ಶ್ರೀ ಗುರು ಮಡಿವಾಳೇಶ್ವರ ಮಠದ ಶ್ರೀ ಪಂಚಾಕ್ಷರಿ ಸ್ವಾಮೀಜಿಯವರಿಂದ ದೇವಿ ಪುರಾಣ ಪ್ರವಚನ ಜರುಗಲಿದೆ.

Home add -Advt

ಸಾಂಸ್ರ್ಕತಿಕ ಕಾರ್ಯಕ್ರಮ

ಮೇ 6ರಂದು ರಾತ್ರಿ 10 ಗಂಟೆಗೆ ದ್ಯಾಮಣ್ಣ ಜ್ಯೋತೆನ್ನವರ ಸಂಗಡಿಗರಿಂದ ಡೊಳ್ಳಿನ ಪದಗಳ ಕಾರ್ಯಕ್ರಮ ನಡೆಯಲಿದೆ. 7ರಂದು ರಾತ್ರಿ 9 ಗಂಟೆಗೆ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು,ಚನ್ನಮ್ಮನ  ಕಿತ್ತೂರು ಸಿಪಿಐ ಶಿವಾನಂದ ಗುಡಗನಟ್ಟಿ ಚಾಲನೆ ನೀಡುವರು. 

8ರಂದು ರಾತ್ರಿ 9 ಗಂಟೆಗೆ ಸುಗಮ ಸಂಗೀತ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಚಾಲನೆ ನೀಡುವರು. 9ರಂದು ರಾತ್ರಿ 9 ಗಂಟೆಗೆ ನಮ್ಮೂರ ಗ್ರಾಮದೇವಿ ಜಾತ್ರೆ ವಿಶೇಷ ಕಾರ್ಯಕ್ರಮ ನಿವೃತ್ತ ಶಿಕ್ಷಕ ಡಿ.ಬಿ. ಹಿರೇಮಠ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸಾಹಿತಿ ಡಾ| ಸಿ.ಕೆ. ನಾವಲಗಿ ಉಪನ್ಯಾಸ ನೀಡುವರು. 10ರಂದು ರಾತ್ರಿ 9 ಗಂಟೆಗೆ ದೇವಿ ಪುರಾಣ ಮಂಗಲ ಕಾರ್ಯಕ್ರಮ ಜರುಗಲಿದೆ.

11ರಂದು ರಾತ್ರಿ 9 ಗಂಟೆಗೆ ಹಾಸ್ಯ ರಸಮಂಜರಿ ನಡೆಯಲಿದ್ದು, ಶಾಸಕ ಬಾಬಾಸಾಹೇಬ ಪಾಟೀಲ ಅಧ್ಯಕ್ಷತೆ ವಹಿಸುವರು. 12ರಂದು ರಾತ್ರಿ 9 ಗಂಟೆಗೆ ಡಾ| ಶರ್ಮಿಳಾ ಹಿರೇಮಠ ಅವರಿಂದ ರಸಮಂಜರಿ ನಡೆಯಲಿದ್ದು, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಉದ್ಘಾಟಿಸುವರು. 

13ರಂದು ರಾತ್ರಿ 10:30 ಗಂಟೆಗೆ ಗ್ರಾಮದ ಶ್ರೀ ಕಲ್ಮೇಶ್ವರ ನಾಟ್ಯಸಂಘದವರಿಂದ `ರೈತ ಹಚ್ಚಿದ ದೀಪ ನಾಟಕ ಪ್ರದರ್ಶನಗೊಳ್ಳಲಿದೆ. 14ರಂದು ರಾತ್ರಿ 10 ಗಂಟೆಗೆ ಸಂಗ್ಯಾ ಬಾಳ್ಯಾ ಡಬ್ಬಿನ ಆಟ ನಡೆಯಲಿದ್ದು, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸುವರು. 15ರಂದು ರಾತ್ರಿ 8 ಗಂಟೆಗೆ ಕೀರ್ತನೆ ನಡೆಯಲಿದೆ. ಮೇ 16ರಂದು ಸಾಯಂಕಾಲ ದೇವಿಯರ ಸೀಮೋಲ್ಲಂಘನ, 20ರಂದು ದೇವಿಯರ ಪುನರ್ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ.

Related Articles

Back to top button