Latest

ಬಸ್ ಗಾಗಿ ಕಾಯುತ್ತಿದ್ದ ಯುವಕನ ಕೈಗೆ ಮಗು ಕೊಟ್ಟು ಪರಾರಿಯಾದ ಮಹಿಳೆ

ಪ್ರಗತಿವಾಹಿನಿ ಸುದ್ದಿ; ರಾಯಚೂರು: ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತ ನಿಂತಿದ್ದ ಯುವಕನ ಕೈಗೆ 9 ತಿಂಗಳ ಮಗುವನ್ನು ಕೊಟ್ಟು ಮಹಿಳೆಯೊಬ್ಬರು ನಾಪತ್ತೆಯಾಗಿರುವ ಘಟನೆ ರಾಯಚೂರು ಬಸ್ ನಿಲ್ದಾಣದಲ್ಲಿ ನಡೆದಿದೆ.

ಮೈಸೂರಿನ ಹೆಚ್.ಡಿ.ಕೋಟೆ ನಿವಾಸಿ ರಘು ಎಂಬಾತನ ಕೈಗೆ ಮಹಿಳೆ ಮಗುವನ್ನು ಕೊಟ್ಟು ನಾಪತ್ತೆಯಾಗಿದ್ದಾರೆ. ರಘು ಕೆಲಸದ ನಿಮಿತ್ತ ಮೈಸೂರಿನಿಂದ ರಾಯಚೂರಿಗೆ ಬಂದಿದ್ದರು. ಕೆಲಸ ಮುಗಿಸಿ ಮೈಸೂರಿಗೆ ವಾಪಸ್ಸಾಗಲೆಂದು ಬಸ್ ಗಾಗಿ ಕಾಯುತ್ತಾ ರಾಯಚೂರಿನ ಬಸ್ ನಿಲ್ದಾಣದಲ್ಲಿ ನಿಂತಿದ್ದರು.

ಈ ವೇಳೆ ಮಹಿಳೆಯೊಬ್ಬರು ತನ್ನ ಮಗುವನ್ನು ಸ್ವಲ್ಪಹೊತ್ತು ನೋಡಿಕೊಳ್ಳುವಂತೆ ಹೇಳಿ ಮಗುವನ್ನು ಕೈಗಿತ್ತು ಹೋಗಿದ್ದಾರೆ. 3-4 ಗಂಟೆಯಾದರೂ ಮಹಿಳೆಯ ಸುಳಿವಿಲ್ಲ. ಬೇರೆದಾರಿಕಾಣದೇ ಮಗುವಿನ ಸಮೇತ ರಘು ಮೈಸೂರಿಗೆ ಬಂದಿದ್ದಾರೆ. ಬಳಿಕ ಮಗುವನ್ನು ಲಷ್ಕರ್ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಮಗುವಿನ ಆರೈಕೆ ಮಾಡಿದ ಸಿಬ್ಬಂದಿ ಮಗುವನ್ನು ಬಾಲ ಮಂದಿರದ ವಶಕ್ಕೆ ನೀಡಿದ್ದಾರೆ. ತಾಯಿಯ ಪತ್ತೆಗಾಗಿ ರಾಯಚೂರು ಪೊಲೀಸರಿಗೆ ತಿಳಿಸಿದ್ದಾರೆ.
ಆಜಾನ್ ವಿವಾದ; ಸುಪ್ರೀಂ ಕೋರ್ಟ್ ಆದೇಶ ಕಟ್ಟುನಿಟ್ಟಾಗಿ ಪಾಲಿಸಲು ಸಿಎಂ ಸೂಚನೆ

Home add -Advt

Related Articles

Back to top button