Belagavi NewsBelgaum NewsKannada NewsKarnataka NewsLatest

*ಬೆನ್ನು ನೋವಿನ ಸಮಸ್ಯೆ ಇರುವವರಿಗೆ ಪ್ರಮುಖ ಮಾಹಿತಿ*

ಕೆಎಲ್‌ಇ ಆಸ್ಪತ್ರೆಯಲ್ಲಿ ಈ ದಿನದಂದು ಬೆನ್ನುಹುರಿ ಶಸ್ತ್ರಚಿಕಿತ್ಸಕರಿಂದ ತಪಾಸಣೆ

ಪ್ರಗತಿವಾಹಿನಿ ಸುದ್ದಿ: ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಬೆನ್ನುಹುರಿ ತಪಾಸಣೆಯನ್ನು ಶನಿವಾರ ದಿ. ೧೦ ಫೆಬ್ರುವರಿ ೨೦೨೪ ರಂದು ಬೆಳಗ್ಗೆ ೧೦ ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ಏರ್ಪಡಿಸಲಾಗಿದೆ.

ಪುಣೆಯ ಬೆನ್ನುಹುರಿ ಶಸ್ತ್ರಚಿಕಿತ್ಸಕರಾದ ಡಾ. ಸಂಜಯ ಪಾಟೀಲ ಅವರು ಆಗಮಿಸಲಿದ್ದು, ಬೆನ್ನುಹುರಿ ತೊಂದರೆಯಿಂದ ಬಳಲುತ್ತಿರುವವರನ್ನು ತಪಾಸಿಸಿ ಸೂಕ್ತ ಸಲಹೆ ಮತ್ತು ಶಸ್ತçಚಿಕಿತ್ಸೆ ಕುರಿತು ಪರಿಹಾರ ತಿಳಿಸಲಿದ್ದಾರೆ.

ಈ ಭೇಟಿಯ ಸದಪಯೋಗವನ್ನು ಪಡೆದುಕೊಳ್ಳುವಂತೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಜನಸಂಪರ್ಕ ವಿಭಾಗ ಅಥವಾ ದೂ. ೨೪೭೩೭೭೭, (ವಿಸ್ತೀರ್ಣ: ೧೧೧೬ \ ೧೧೧೭), ಇಲ್ಲಿಗೆ ಸಂಪರ್ಕಿಸಲು ತಿಳಿಸಲಾಗಿದೆ.

Related Articles

Back to top button