Kannada NewsKarnataka News
ಶ್ರೀ ಬಸವ ಪುರಾಣ ಉದ್ಘಾಟನಾ ಸಮಾರಂಭ; ಚಿತ್ರ ವೈಭವ

ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ -ಡಾ.ಶಿವಬಸವಸ್ವಾಮಿಗಳ ಪುಣ್ಯಸ್ಮರಣೆಯ ರಜತಮಹೋತ್ಸವ ಮತ್ತು ಡಾ.ಸಾವಳಗೀಶ್ವರ ದೇವರ ನಿರಂಜನ ಪಟ್ಟಾಧಿಕಾರ ಮಹೋತ್ಸವ ನಿಮಿತ್ಯ ಬೆಳಗಾವಿ ಜಿಲ್ಲೆಯ ನಾಗನೂರಿನಲ್ಲಿ ಶ್ರೀ ಬಸವ ಪುರಾಣ ಉದ್ಘಾಟನಾ ಸಮಾರಂಭ ಗುರುವಾರ ಸಂಜೆ ನಡೆಯಿತು.
ಶ್ರೀ ಡಾ.ಶಿವಕುಮಾರ ಮಹಾಸ್ವಾಮಿಗಳು ಬೀದರ್, ಶ್ರೀ ಗುರು ಸಿದ್ದ ರಾಜಯೋಗಿಂದ್ರ ಮಹಾಸ್ವಾಮಿಗಳು, ಡಾ.ಸಿದ್ದರಾಮ ಮಹಾಸ್ವಾಮಿಗಳು ಗದಗ- ಬೆಳಗಾವಿ, ಶ್ರೀ ಧಾರವಾಡ ಮುರುಘಾಮಠದ ಶ್ರೀ ಗಳು, ಶ್ರೀ ಹಂದಿಗುಂದ ಶ್ರೀಗಳು, ಮಾಜಿ ಸಚಿವ ಶಿವಾನಂದ ಕೌಜಲಗಿ ಮುಂತಾದವರು ಪಾಲ್ಗೊಂಡಿದ್ದರು.











