ಸರಕಾರಿ ನೌಕರರ ಮುಷ್ಕರ ಫಿಕ್ಸ್: ಷಡಕ್ಷರಿ ಘೋಷಣೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಬುಧವಾರದಿಂದ ಸರಕಾರಿ ನೌಕರರ ಮುಷ್ಕರ ನಡೆಯುವುದು ಖಚಿತವಾಗಿದೆ.

ಮುಖ್ಯಮಂತ್ರಿಗಳ ಸಭೆಯ ನಂತರ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು. ಆದರೆ ಮುಖ್ಯಮಂತ್ರಿಗಳು ಇಟ್ಟಿರುವ ಪ್ರಸ್ತಾಪಗಳನ್ನು ಸಭೆ ತಿರಸ್ಕರಿಸಿತು. 7ನೇ ವೇತನ ಆಯೋಗದ ವರದಿ ಜಾರಿ ಮತ್ತು ಹಳೆಯ ಪಿಂಚಣಿ ಯೋಜನೆ ಜಾರಿ ಎರಡೂ ವಿಷಯದಲ್ಲಿ ಹಿಂದೆ ಸರಿಯದಿರಲು ಸಭೆ ತೀರ್ಮಾನಿಸಿತು.

Related Articles

ಸಭೆಯ ಬಳಿಕ ಮಾತನಾಡಿದ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ, ಸರ್ಕಾರದೊಂದಿಗೆ ಮಾತುಕತೆ ಮುಂದುವರಿಯಲಿದೆ. ಅದರೆ ಮುಷ್ಕರ ಈಗಾಗಲೆ ಘೋಷಿಸಿದಂತೆ ನಡೆಯಲಿದೆ ಎಂದು ತಿಳಿಸಿದರು.

ಬೇಡಿಕೆಯಂತೆ ಸರಕಾರ ಅಧಿಕೃತ ಆದೇಶ ಹೊರಡಿಸುವವರೆಗೂ ಮುಷ್ಕರ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.

Home add -Advt

 

ನೌಕರರಿಗೆ ಸರಕಾರದ ಕಠಿಣ ಎಚ್ಚರಿಕೆ

https://pragati.taskdun.com/government-stern-warning-to-employees/

Related Articles

Back to top button