Kannada NewsLatest

ಅಜಿತ್ ಅಭಿಮಾನಿಯಿಂದ ಆತ್ಮಹತ್ಯಾ ಯತ್ನ

ಅಜಿತ್ ಅಭಿಮಾನಿಯಿಂದ ಆತ್ಮಹತ್ಯಾ ಯತ್ನ

ಪ್ರಗತಿವಾಹಿನಿ ಸುದ್ದಿ – ಪೆರಂಬೂರ್ : ನಟ ಅಜಿತ್ ಅವರ ಅಭಿಮಾನಿಯ ಆತ್ಮಹತ್ಯಾ ಪ್ರಯತ್ನ ಗೊಂದಲಕ್ಕೆ ಕಾರಣವಾಗಿದೆ. ಚಲನಚಿತ್ರ ಬಿಡುಗಡೆಯ ಸಮಯದಲ್ಲಿ ಅಭಿಮಾನಿಗಳು ಇಂತಹ ಮಾರಣಾಂತಿಕ ಪ್ರಯತ್ನವನ್ನು ಮಾಡುತ್ತಿರುವುದು ದುರದೃಷ್ಟಕರ.

ನಿಜವಾದ ವಿಷಯವೆಂದರೆ ನಟ ಅಜಿತ್ ಅವರ ಇತ್ತೀಚಿನ ಚಿತ್ರ ನೆರ್ಕೊಂಡಪರ್ವೈ, ದಿವಂಗತ ನಟಿ ಶ್ರೀದೇವಿ ಅವರ ಪತಿ ಭೋನಿಕಾಪುರ ನಿರ್ಮಿಸಿದ ಮೊದಲ ತಮಿಳು ಚಿತ್ರ, ಎಚ್.ವಿನೋದ್ ನಿರ್ದೇಶನದ ಚಿತ್ರ ಗುರುವಾರ ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ, ಅವರ ಅಭಿಮಾನಿಗಳು ನಗರದ ಚಿತ್ರಮಂದಿರಗಳಲ್ಲಿ ಬಾರೀ ಕಟೌಟ್‌ಗಳು ಮತ್ತು ಪೋಸ್ಟರ್‌ಗಳನ್ನು ಹಾಕಿ ಸಂಭ್ರಮಿಸಿ, ಸಕತ್ ಹಂಗಾಮ ಮಾಡಿದ್ದರು.

Home add -Advt

ಬುಧವಾರ ರಾತ್ರಿ ಸುಮಾರು 11.55 ರ ಸುಮಾರಿಗೆ ಸ್ಥಳೀಯ ರೈಪೆಟ್‌ನ ಸತ್ಯಂ ಸಿನೆಮಾ ಮಲ್ಟಿಪ್ಲೆಕ್ಸ್ ಥಿಯೇಟರ್‌ನಲ್ಲಿ ಅಜಿತ್ ಅವರ ಅಭಿಮಾನಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಟ ಶಾಂತನು ಭಾಗೀರಜ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಘಟನೆ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ.

ಹಾಗೂ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ, ಬುಧವಾರ ರಾತ್ರಿ ನೆರ್ಕೊಂಡಪರ್ವೈ ವೀಕ್ಷಿಸಲು ಟಿಕೆಟ್ ಖರೀದಿಸಲು ಸತ್ಯಂ ಥಿಯೇಟರ್‌ಗೆ ಹೋಗಿದ್ದರು. ಬಹುಷಃ ಟಿಕೆಟ್ ಸಿಗದೆ ಸಮಸ್ಯೆಯಾಗಿರಬಹುದು ಎಂದು ತಿಳಿದುಬಂದಿದೆ, ಆತ್ಮಹತ್ಯೆಗೆ ಯತ್ನಿಸಿದ ಆತನನ್ನು ತಕ್ಷಣ ಪೊಲೀಸರು ತಡೆದು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ. ಅಜಿತ್‌ರಂತಹ ಜನಪ್ರಿಯ ನಟರು ಅಭಿಮಾನಿಗಳು ಇಂತಹ ಕೃತ್ಯ ತಪ್ಪಿಸಬೇಕು ಎಂದು ಸಂದೇಶ ನೀಡಬೇಕು, ಎಂದು ನಟ ಭಾಗೀರಜ್ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ.////

Related Articles

Back to top button