Kannada NewsKarnataka News

*ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತ*

ಪ್ರಗತಿವಾಹಿನಿ ಸುದ್ದಿ: ಸಾಲಭಾದೆ ತಾಳಲಾರದೇ ಜಮೀನಿನಲ್ಲಿ ವಿಷ ಸೇವಿಸಿ ರೈತ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. 

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲ್ಲೂಕಿನ ಲಕ್ಕಸಕೊಪ್ಪ ಗ್ರಾಮದ ರೈತ ಹನುಮಂತ ಭೀಮಪ್ಪ ಮುರನಾಳ (55) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.‌ ಮಂಗಳವಾರ ಜಮೀನಿನಲ್ಲಿ ವಿಷ ಸೇವಿಸಿದ್ದ ರೈತನನ್ನು ಬಳಿಕ ಕುಟುಂಬಸ್ಥರು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರು ಆದರೆ ಇಂದು ಚಿಕಿತ್ಸೆ ಫಲಕಾರಿಯಾದೇ ಇಂದು ಖಾಸಗಿ ಆಸ್ಪತ್ರೆಯಲ್ಲಿ ರೈತ ಕೊನೆಯುಸಿರೆಳೆದಿದ್ದಾನೆ. 

Home add -Advt

ಮೃತ ರೈತ ಎರಡೂವರೆ ಎಕರೆ ಸಂತ ಜಮೀನು ಹೊಂದಿದ ಎನ್ನಲಾಗಿದೆ.‌ 2 ಎಕರೆ ಜಮೀನಿನಲ್ಲಿ ಲಾವಣಿ ಮಾಡುತ್ತಿದ್ದರು. ಬೆಳೆಗಾಗಿ ಸುಮಾರು 7 ರಿಂದ 8 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.‌ ಬ್ಯಾಂಕ್, ಅಡತಿ ಅಂಗಡಿ ಸೇರಿ ಕೈಗಡ ಮೂಲಕ ಸಾಲ ಮಾಡಿಕೊಂಡಿದ್ದಾ,  ಬೆಳೆ ಸರಿಯಾಗಿ ಬಾರದ ಕಾರಣ ಸಾಲದಿಂದ ಬೇಸರಗೊಂಡಿದ್ದರಿಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.‌ ಕೆರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.‌

Related Articles

Back to top button