Kannada NewsKarnataka NewsLatest
*ವಿದ್ಯುತ್ ತಂತಿ ತಗುಲಿ ತಂದೆ-ಮಗಳು ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ತುಮಕೂರು: ಜಮೀನಿಗೆ ಹೋಗಿದ್ದ ತಂದೆ – ಮಗಳು ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ತುಮಕೂರು ಮೂಲದ ಪಾವಗಡ ತಾಲೂಕಿನ ಬಸವನಳ್ಳಿ ಗ್ರಾಮದ ದಿಗವಿಂಟಿ ರಾಮಕೃಷ್ಣ (65) ಹಾಗೂ ಮಗಳು ನಿರ್ಮಲಾ (45) ಮೃತ ದುರ್ದೈವಿಗಳು.
ಜಮೀನಿಗೆ ನೀರು ಹಾಯಿಸಲು ಆಂಧ್ರಪ್ರದೇಶದ ಮಡಕಶಿರಾ ತಾಲೂಕಿನ ಎಲ್ಲೋಟಿ ಗ್ರಾಮಕ್ಕೆ ಹೋಗಿದ್ದರು. ಈ ವೇಳೆ ವಿದ್ಯುತ್ ತಂತಿ ತಗುಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.




