Belagavi NewsBelgaum NewsKannada NewsKarnataka News

*ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಗೊತ್ತುವಳಿ ಸ್ವೀಕರಿಸಲು ಪಾಲಿಕೆ ಹಿಂದೇಟು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಬೆಳಗಾವಿಯು ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಮಹತ್ವದ ನಿರ್ಣಯವನ್ನು ಅಧಿಕೃತವಾಗಿ ಅಂಗೀಕರಿಸುವಂತೆ ಕನ್ನಡ ಪರ ಸದಸ್ಯರು ಪಟ್ಟು ಹಿಡಿದರು. ಈ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಎಂಇಎಸ್  ಸದಸ್ಯರು, ಗಡಿ ವಿವಾದ ನ್ಯಾಯಾಲಯದ ಅಂಗಳದಲ್ಲಿ ಇರುವುದರಿಂದ ಇಂತಹ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ ಎಂದು ವಾದಿಸಿ ಗದ್ದಲ ಸೃಷ್ಟಿಸಿದರು.

ಈ ಆಂತರಿಕ ಜಗಳದ ನಡುವೆಯೇ ಹೊರಗಡೆ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿತು. ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿ, ನಾಡಿನ ಪರವಾಗಿ ಘೋಷಣೆಗಳನ್ನು ಕೂಗಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಬೇಕಾಯಿತು. ಅಂತಿಮವಾಗಿ ಮಧ್ಯಪ್ರವೇಶಿಸಿದ ಮೇಯ‌ರ್ ಅವರು ಈ ಸೂಕ್ಷ್ಮ ವಿಷಯದ ಕುರಿತು ರಾಜ್ಯ ಸರ್ಕಾರದ ಕಾನೂನು ಅಭಿಪ್ರಾಯವನ್ನು ಪಡೆದು ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಘೋಷಿಸಿ ಸಭೆಯನ್ನು ಶಾಂತಗೊಳಿಸಿದರು.

Home add -Advt

ಎಂಇಎಸ್‌ ಸದಸ್ಯರ ತೀವ್ರ ವಿರೋಧದ ನಡುವೆಯೂ ಕನ್ನಡ ಪರ ಸದಸ್ಯರು ಮಹಾಜನ್ ವರದಿಯೇ ಅಂತಿಮ ಎಂದು ಪ್ರತಿಪಾದಿಸಿದ್ದು ಕರ್ನಾಟಕ ವಿಧಾನಸಭೆಯ ಮಾದರಿಯಲ್ಲೇ ಪಾಲಿಕೆಯಲ್ಲೂ ಕರ್ನಾಟಕದ ಪರವಾದ ಸ್ಪಷ್ಟ ಗೊತ್ತುವಳಿ ಜಾರಿಯಾಗಲೇಬೇಕು ಎಂಬ ಹಠಕ್ಕೆ ಕನ್ನಡಿಗ ಸದಸ್ಯರು ಬದ್ಧರಾಗಿದ್ದರು.

Related Articles

Back to top button