Latest

ಪತ್ನಿ ಮಗುವಿಗೆ ಅನ್ನ, ನೀರು ಕೊಡದೇ ಮನೆಯಿಂದ ಹೊರಹಾಕಿದ ಟೆಕ್ಕಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಟೆಕ್ಕಿಯೊಬ್ಬ ತನ್ನ ಪತ್ನಿ ಹಾಗೂ 2 ವರ್ಷದ ಮಗುವಿಗೆ ಊಟವನ್ನೂ ಕೊಡದೇ ಮನೆಯಿಂದ ಹೊರಹಾಕಿರುವ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹೈದರಾಬಾದ್ ಮೂಲದ ಟೆಕ್ಕಿ ಹರಿಪ್ರಸಾದ್ ತೋಟಾ ಹಾಗೂ ಆತನ ಮನೆಯವರ ವಿರುದ್ಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಇದೀಗ ಪತ್ನಿ ದೂರು ದಾಖಲಿಸಿದ್ದಾಳೆ.

ಹರಿಪ್ರಸಾದ್ ಹಾಗೂ ಆತನ ಮನೆಯವರು ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಅಲ್ಲದೇ ಕಳೆದ ಮೂರು ತಿಂಗಳಿಂದ ಹರಿಪ್ರಸಾದ್ ಪತ್ನಿ ಸಂಪರ್ಕಕ್ಕೆ ಸಿಗದೇ ಮನೆಬಿಟ್ಟು ಹೋಗಿದ್ದ. ಇತ್ತ ಪತಿ ಮನೆಯವರು ಮಹಿಳೆಗೆ ಹಾಗೂ 2 ವರ್ಷದ ಮಗುವಿಗೆ ಊಟವನ್ನೂ ನೀಡದೇ ಮನೆಯಿಂದ ಹೊರಹಾಕಿದ್ದಾರೆ ಎನ್ನಲಾಗಿದೆ.

ರಾತ್ರಿಯಿಡಿ ಮಳೆ, ಕೊರೆಯುವ ಚಳಿಯಲ್ಲಿ ಮನೆಯ ಹೊರಗೆ ಕಳೆದ ಮಹಿಳೆ ಮನೆಯವರ ಕಿರುಕುಳಕ್ಕೆ ಬೇಸತ್ತು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

Home add -Advt

Related Articles

Back to top button