Belagavi NewsBelgaum News

*ಹಿರೇಬಾಗೇವಾಡಿ: ರಸ್ತೆ ಕಾಮಗಾರಿಗೆ ಚನ್ನರಾಜ ಹಟ್ಟಿಹೊಳಿ ಚಾಲನೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ ಕೆಇಬಿ ಸ್ಟೇಷನ್ ನಿಂದ ಕುಕಡೊಳ್ಳಿ ಗ್ರಾಮದವರೆಗಿನ ರಸ್ತೆ ನಿರ್ಮಾಣದ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಶನಿವಾರ ಸಂಜೆ ಭೂಮಿ‌ ಪೂಜೆ ನೆರವೇರಿಸಿ, ಚಾಲನೆ ನೀಡಿದರು.

ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಶ್ರೀ ಜಪ್ತಿ, ಉಪಾಧ್ಯಕ್ಷರಾದ ಶ್ರುತಿ ಸಿದ್ದಣ್ಣವರ, ಅಡಿವೇಶ ಇಟಗಿ, ನಿಂಗಪ್ಪ ತಳವಾರ, ಸ್ವಾತಿ ಇಟಗಿ, ಆನಂದ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಸಿ.ಪಾಟೀಲ, ಪ್ರಕಾಶ ಜಪ್ತಿ, ಮಲ್ಲಪ್ಪ ಹುಲಿಕವಿ, ಆರ್.ಅಭಿಲಾಷ್, ಈರಣಗೌಡ ಪಾಟೀಲ, ರವಿ ಮೇಳೆದ್, ಅನಿಲ ಪಾಟೀಲ, ಇಮ್ತಿಯಾಜ್ ಕರಿದಾವಲ್, ಪಡಿಗೌಡ ಪಾಟೀಲ, ಅಡಿವೆಪ್ಪ ತೋಟಗಿ, ವಾಯ್.ಎಲ್.ಪಾಟೀಲ, ಪ್ರವೀಣ ಪಾಟೀಲ, ಸಲೀಂ ಸತ್ತಿಗೇರಿ, ಸಂಗಪ್ಪ ಕುಡಚಿ, ಶಿವಾನಂದ ಚಂಡು ಉಪಸ್ಥಿತರಿದ್ದರು.

Home add -Advt

Related Articles

Back to top button