Latest

ದೇವಸ್ಥಾನದ ಬಾಗಿಲಲ್ಲೇ ನಗರಸಭೆ ಸದಸ್ಯನ ಬರ್ಬರ ಹತ್ಯೆ

ಪ್ರಗತಿವಾಹಿನಿ ಸುದ್ದಿ; ಕೋಲಾರ: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ ಮೋಹನ್ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲಿನಲ್ಲಿ ನಡೆದಿದೆ.

ಜಗನ್ ಮೋಹನ್ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವರ ಬಲಗೈ ಬಂಟ. ಇಂದು ಮುಂಜಾನೆ 5:30ರ ಸುಮಾರಿಗೆ ಜಗನ್ ಮನೆ ಬಳಿಯ ದೇವಸ್ಥಾನದ ಗಂಟೆಯನ್ನು ದುಷ್ಕರ್ಮಿಗಳು ಬಾರಿಸಿದ್ದಾರೆ. ಯಾರೋ ಭಕ್ತರು ದೇವಸ್ಥಾನಕ್ಕೆ ಬಂದಿರಬೇಕು ಎಂದು ಜಗನ್ ಮೋಹನ್ ದೇವಸ್ಥಾನದ ಬಾಗಿಲು ತೆರೆಯಲೆಂದು ಬಂದಿದ್ದಾರೆ.

ದೇವಸ್ಥಾನದ ಬಳಿಯೇ ದುಷ್ಕರ್ಮಿಗಳು ನಿಂತಿದ್ದರೂ ಭಕ್ತರಿರಬೇಕು ಎಂದುಕೊಂಡು ದೇವಸ್ಥಾನದ ಬಾಗಿಲನ್ನು ಜಗನ್ ತೆರೆದಿದ್ದಾರೆ ಇದೇ ವೇಳೆ ದಾಳಿ ನಡೆಸಿರುವ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ. ಈ ಭಯಂಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಂಗಳೂರಿನಲ್ಲಿ ಕಾಶ್ಮೀರ ಮೂಲದ ಉಗ್ರನ ಬಂಧನ

Home add -Advt

Related Articles

Back to top button