Kannada NewsLatest

ಬಾಲಕನ ಮೇಲೆ ಬಿದ್ದ ಕಾಲೇಜು ಗೇಟ್; ಸ್ಥಳದಲ್ಲೇ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕಾಲೇಜಿನ ಕಾಂಪೌಂಡ್ ಗೆ ಅಳವಡಿಸಿದ್ದ ಗೇಟ್ ಬಿದ್ದು ಬಾಲಕನೊಬ್ಬ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿಯಯಲ್ಲಿ  ನಡೆದಿದೆ.

ಇಂದಿರಾನಗರದ ನಿವಾಸಿ 10 ವರ್ಷದ ಸೂಫಿಯಾನ್ ರಾಜು ಮುಲ್ಲಾ ಮೃತ ಬಾಲಕ. ಮನೆಗೆ ಹೋಗಲೆಂದು ಬಾಲಕ ಗೇಟ್ ದಾಟುತ್ತಿದ್ದ ವೇಳೆ ಏಕಾಏಕಿ ಗೇಟ್ ಬಾಲಕನ ಮೇಲೆ ಬಿದ್ದಿದೆ. ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದ್ದು, ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡ್ಡಾ ಜೊತೆ ಚರ್ಚೆ: ಸಚಿವ ಸಂಪುಟ ರಚನೆಗೆ ಇಂದೇ ಮುಹೂರ್ತ ಫಿಕ್ಸ್?

Home add -Advt

Related Articles

Back to top button