Belagavi NewsBelgaum NewsKarnataka News

*ಪಡಿತರ ಚೀಟಿ ಇದ್ದವರು ಈಗಲೇ ಈ ಕೆಲಸ ಮಾಡಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮುಂದಿನ ದಿನಗಳಲ್ಲಿ ನಿರಂತರವಾಗಿ ಪಡಿತರ ಪದಾರ್ಥಗಳನ್ನು ಪಡೆಯಲು ಜಿಲ್ಲೆಯಲ್ಲಿ ಬಾಕಿ ಉಳಿದ ಅಂತ್ಯೋದಯ, ಆಧ್ಯತಾ (ಬಿ.ಪಿ.ಎಲ್) ಮತ್ತು ಆದ್ಯತೇತರ (ಎ.ಪಿ.ಎಲ್) ಪಡಿತರ ಚೀಟಿದಾರರು ಯಾರೆಂದು ತಿಳಿಸಲಾಗಿದೆ. 

ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು ಅಂತ್ಯೋದಯ 67,791 ಹಾಗೂ ಆದ್ಯತಾ (ಬಿಪಿಎಲ್) 10,75,209 ಪಡಿತರ ಚೀಟಿಗಳಿದ್ದು ಪಡಿತರ ಚೀಟಿಗಳಲ್ಲಿನ ಒಟ್ಟು 39,30,682 ಸದಸ್ಯರಿದ್ದು ಅವರುಗಳ ಪೈಕಿ 38,80,183 ಪಡಿತರ ಚೀಟಿದಾರರ ಇ-ಕೆವೈಸಿ ಮಾತ್ರ ಪೂರ್ಣಗೊಂಡಿದ್ದು, ಇನ್ನು ಉಳಿದ 50,499 ಸದಸ್ಯ ಪಡಿತರ ಚೀಟಿದಾರರು ಇ-ಕೆವೈ.ಸಿ ಮಾಡಿಸಿಕೊಳ್ಳುವುದು ಬಾಕಿ ಉಳಿದುಕೊಂಡಿದೆ.

ಮುಂದಿನ ದಿನಗಳಲ್ಲಿ ನಿರಂತರವಾಗಿ ಪಡಿತರ ಪದಾರ್ಥಗಳನ್ನು ಪಡೆಯಲು ಜಿಲ್ಲೆಯಲ್ಲಿ ಬಾಕಿ ಉಳಿದ ಅಂತ್ಯೋದಯ, ಆಧ್ಯತಾ (ಬಿ.ಪಿ.ಎಲ್) ಮತ್ತು ಆದ್ಯತೇತರ (ಎ.ಪಿ.ಎಲ್) ಪಡಿತರ ಚೀಟಿದಾರರು ಯಾರೆಂದು ತಿಳಿಸಲಾಗಿದೆ. 

ಇ-ಕೆವೈಸಿ ಮಾಡಿಸಿಕೊಳ್ಳಲು ಇದು ಕೊನೆಯ ಅವಕಾಶವಾಗಿದೆ ಎಂದು ಆಹಾರ ಮತ್ತು ನಾಗರಿಕ ಸಮೀಪದ ನ್ಯಾಯಬೆಲೆ ಅಂಗಡಿಗಳಿಗೆ ಏಪ್ರಿಲ್ 30 ರೊಳಗಾಗಿ ಭೇಟಿ ನೀಡಿ ಇ-ಕೆವೈಸಿಯನ್ನು ಮಾಡಿಸಿಕೊಳ್ಳಲು ಸರಬರಾಜು ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Home add -Advt

Related Articles

Back to top button