Latest

ಕಾಶ್ಮೀರಿ ಪಂಡಿತರಿಗೆ ಸಹಾಯ ಮಾಡಿದ್ದಾಗಿ ಕೇಜ್ರಿವಾಲ್ ಸುಳ್ಳು ಹೇಳಿದ್ದಾರೆ

ಪ್ರಗತಿ ವಾಹಿನಿ ಸುದ್ದಿ; ಬೆಂಗಳೂರು: ಕಾಶ್ಮೀರಿ ಪಂಡಿತರಿಗೆ 2015 ರಲ್ಲಿ ಸಹಾಯ ಒದಗಿಸಿದ್ದಾಗಿ ಹೇಳಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒಬ್ಬ ಸುಳ್ಳುಗಾರ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕಿಡಿ ಕಾರಿದ್ದಾರೆ.

2015 ರಲ್ಲಿ ನಿರಾಶ್ರಿತ ಕಾಶ್ಮೀರಿ ಪಂಡಿತ್ ಸಮುದಾಯದ ಶಿಕ್ಷಕರನ್ನು ಗುತ್ತಿಗೆ ಆಧಾರ ರದ್ದುಪಡಿಸಿ ಕಾಯಂಗೊಳಿಸಲಾಗಿತ್ತು, ಈ ಮೂಲಕ ದೆಹಲಿ ಸರಕಾರ ಕಾಶ್ಮೀರಿ ಪಂಡಿತರಿಗೆ ಸಹಾಯ ಹಸ್ತ ಚಾಚಿದೆ ಎಂದು ದಿನಪತ್ರಿಕೆಯ ಲೇಖನವನ್ನು ಟ್ವೀಟ್ ಮಾಡಿ ಕೇಜ್ರಿವಾಲ್ ಹೇಳಿಕೊಂಡಿದ್ದರು.

ಕೇಜ್ರಿವಾಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ತೇಜಸ್ವಿ ಸೂರ್ಯ, ಕಾಶ್ಮೀರಿ ಪಂಡಿತ ಸಮುದಾಯದ ಶಿಕ್ಷಕರ ಹುದ್ದೆಗಳನ್ನು ಕಾಯಂಗೊಳಿಸುವಂತೆ ಸುಪ್ರಿಂ ಕೋರ್ಟಿನ ಆದೇಶವಿತ್ತು. ಹಾಗಾಗಿ ಅಂದಿನ ದೆಹಲಿ ಸರಕಾರಕ್ಕೆ ಕ್ರಮ ಅನುಸರಿಸುವುದು ಅನಿವಾರ್ಯವಾಗಿತ್ತು ಎಂದು ಪ್ರತಿಪಾದಿಸಿದ್ದಾರೆ.
ನಲಪಾಡ್ ರೆಸ್ಟೋರೆಂಟ್ ನಲ್ಲಿ ಮಹಿಳೆ ಮೇಲೆ ಹಲ್ಲೆ

Home add -Advt

Related Articles

Back to top button