Kannada NewsKarnataka NewsLatest

ಆಸ್ತಿಗಾಗಿ ಮಗನನ್ನೇ ಜಜ್ಜಿ ಕೊಂದ 80 ವರ್ಷದ ಅಪ್ಪ

  ಪ್ರಗತಿವಾಹಿನಿ ಸುದ್ದಿ, ಮುಗಳಖೋಡ: ಸಮೀಪದ ಖನದಾಳ ಗ್ರಾಮದ ತೋಟದ ಮನೆಯಲ್ಲಿ ಕಲ್ಲಿನಿಂದ ಎತ್ತಿಹಾಕಿ ಕೊಲೆ ಮಾಡಿದ ಘಟನೆ ಬುಧವಾರ ಬೆಳಗಿನ ಜಾವ ಹಾರೂಗೇರಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಅಲಗೌಡ ಚನ್ನಪ್ಪ ಆಜೂರೆ (೩೮) ತಂದೆಯಿಂದ ಕೊಲೆಯಾದ ಪುತ್ರ. ತಂದೆ ಚನ್ನಪ್ಪ ಆಜೂರೆ (೮೦) ಆರೋಪಿ.

ಆರು ಎಕರೆ ಆಸ್ತಿವಿವಾದ ಹಾಗೂ ನಗದು ಹಣದ ವ್ಯವಹಾರದ ಬಗ್ಗೆ ತಂದೆ ಮಗನ ನಡುವೆ ವಾದ ವಿವಾದ ಮೇಲಿಂದ ಮೇಲೆ ನಡೆಯಿತ್ತಿತ್ತು. ಬುಧವಾರ ಬೆಳ್ಳೆಗೆ 3 ಘಂಟೆಗೆ ಮಗ ಮಲಗಿದ ಸಂದರ್ಭದಲ್ಲಿ ತಂದೆ ಚನ್ನಪ್ಪ ಮಗನ ಮೇಲೆ ಕಲ್ಲು ಹಾಕಿದ್ದು ಮಗ ಸ್ಥಳದಲ್ಲಿ ಮೃತ್ತಪಟ್ಟಿದ್ದಾನೆ. ಕೊಲೆಯಾದ ಅಲಗೌಡನಿಗೆ ಇಬ್ಬರು ಹೆಂಡಿರು, ಇಬ್ಬರು ಪುತ್ರರು, ಮೂವರು ಪುತ್ರಿಯರು ಇದ್ದಾರೆ. ಹಾರೂಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button