
ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಮಾತ್ರವಲ್ಲ ದೆಹಲಿ, ಉತ್ತರ ಪ್ರದೇಶ, ಹಿಮಾಚಾಲ ಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಸಾಲು ಸಾಲು ಅನಾಹುತಗಳು ಸಂಭವಿಸುತ್ತಿವೆ.
ಉತ್ತರ ಪ್ರದೇಶದಲ್ಲಿ ವರುಣಾರ್ಭಟಕ್ಕೆ ಎಸ್ಐ ಓರ್ವರು ಬಲಿಯಾಗಿದ್ದಾರೆ. ಉತ್ತರ ಪ್ರದೇಶದ ಗಾಜಿಯಾಬಾದ್ ನ ಅಂಕುರ್ ವಿಹಾರ್ ಎಸಿಪಿ ಕಚೇರಿಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಎಸ್ಐ ಓರ್ವರು ಮೃತಪಟ್ಟಿದ್ದಾರೆ.
ವೀರೇಂದ್ರ ಮಿಶ್ರಾ (58) ಮೃತ ಎಸ್ಐ. ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಎಸಿಪಿ ಕಚೇಇ ಮೇಲ್ಛಾವಣಿ ಕುಸಿದು ಬಿದ್ದು ಈ ದುರತ ಸಂಭವಿಸಿದೆ.