Karnataka NewsLatest

ಆತ್ಮಹತ್ಯೆಗೆ ಶರಣಾದ ಶೃತಿ ಕಪ್ಪಲಗುದ್ದಿ

ಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ ಪತ್ನಿ

 

ಪ್ರಗತಿವಾಹಿನಿ ಸುದ್ದಿ, ಗೋಕಾಕ – ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ನಿರ್ದೇಶಕ ಕಲ್ಲೋಳಿಯ ನೀಲಕಂಠ ಕಪ್ಪಲಗುದ್ದಿ ಅವರ ಪತ್ನಿ, 30 ವರ್ಷದ ಶೃತಿ ನೇಣಿಗೆ ಶರಣಾಗಿದ್ದಾರೆ.

Home add -Advt

ಕೌಟುಂಬಿಕ ಕಲಹವೇ ಶೃತಿ ಆತ್ಮಹತ್ಯೆಗೆ ಕಾರಣ ಎನ್ನಲಾಗಿದ್ದು, ಮಾರಿಹಾಳದ ಶೃತಿಯ ತಂದೆ ಪೊಲೀಸ್ ದೂರು ದಾಖಲಿಸಿದ್ದಾರೆ. ದಂಪತಿಗೆ ಒಂದೂವರೆ ವರ್ಷದ ಮಗಳಿದ್ದಾಳೆ. ತನ್ನ ಮಗಳ ಬಗ್ಗೆ ಕಾಳಜಿವಹಿಸುವಂತೆ ತಂದೆಗೆ ಮೆಸೇಜ್ ಮಾಡಿದ ಶೃತಿ ನಂತರ ನೇಣಿಗೆ ಶರಣಾಗಿದ್ದಾಳೆ.

ನೀಲಕಂಠ ಕಪ್ಪಲಗುದ್ದಿ ವಿಪರೀತ ಕುಡುತದ ದಾಸನಾಗಿದ್ದ. ಮನೆಗೆ ಸರಿಯಾದ ಸಮಯಕ್ಕೆ ಬರುತ್ತಿರಲಿಲ್ಲ. ಹಾಗಾಗಿ ಶೃತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ನ್ನಲಾಗುತ್ತಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Related Articles

Back to top button