ಕನ್ನಡ ಸುದ್ದಿ
-
Karnataka News
*ಮಹಿಳಾ ಉದ್ಯಮಿಗಳಿಗಾಗಿ ಕೆಲವು ಡಿಜಿಟಲ್ ಪೇಮೆಂಟ್ ಸಲಹೆಗಳು*
ಅಂತರರಾಷ್ಟ್ರೀಯ ಮಹಿಳಾ ದಿನ ಸಂದರ್ಭದಲ್ಲಿ ಮಹಿಳಾ ಉದ್ಯಮಿಗಳಿಗಾಗಿ ವೀಸಾ ಸಂಸ್ಥೆ ನೀಡಿದ ಕೆಲವು ಡಿಜಿಟಲ್ ಪೇಮೆಂಟ್ ಸಲಹೆಗಳು ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಪ್ರಸ್ತುತ ಹೆಚ್ಚು ಹೆಚ್ಚು ಮಹಿಳೆಯರು ಉದ್ಯಮಿಗಳಾಗುತ್ತಿದ್ದಾರೆ. ಉದ್ಯಮಿಗಳಾಗುವುದು ಮುಖ್ಯವಲ್ಲ. ಆ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಬಹಳ ಮುಖ್ಯ. ಅವರು ಮೊದಲ ತಮ್ಮ ಉದ್ಯಮ ಯೋಜನೆಯಲ್ಲಿ ಡಿಜಿಟಲ್ ಪೇಮೆಂಟ್ ಮತ್ತು ಭದ್ರತೆಯ ಕಡೆಗೆ ಗಮನ ಹರಿಸಬೇಕು. ಹಾಗಾಗಿ ಈ ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ವೀಸಾ ಸಂಸ್ಥೆಯು ಸುರಕ್ಷಿತ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಹೊಂದಲು ಮತ್ತು ತಮ್ಮ ಉದ್ಯಮವನ್ನು ವಿಸ್ತರಿಸಿಕೊಳ್ಳಲು ಮಹಿಳಾ ಉದ್ಯಮಿಗಳಿಗೆ ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದೆ: ಭದ್ರತೆ ಮೊದಲ ಆದ್ಯತೆಯಾಗಿರಲಿ: ಉದ್ಯೋಗಿಗಳಿಗೆ ಡಿಜಿಟಲ್ ವಿಚಾರದಲ್ಲಿ ಪಾಲಿಸಬೇಕಾದ ಉತ್ತಮ ಪದ್ಧತಿಗಳು ಮತ್ತು ಹೊಸ ರೀತಿಯ ಡಿಜಿಟಲ್ ವಂಚನೆಗಳ ಕುರಿತು ನಿಯಮಿತವಾಗಿ ತರಬೇತಿ ನೀಡಿ. ಉತ್ಪನ್ನ ಯೋಜನೆ ಮತ್ತು ಗ್ರಾಹಕ ಸೇವೆ ವಿಭಾಗದಲ್ಲಿ ಭದ್ರತೆಯನ್ನು ಮೊದಲ ಆದ್ಯತೆಯಾಗಿಟ್ಟುಕೊಳ್ಳಿ. ಸುರಕ್ಷಿತವಾದ ಟ್ಯಾಪ್, ಪೇ ಮತ್ತು ಕ್ಲಿಕ್ ಪೇಮೆಂಟ್ ವ್ಯವಸ್ಥೆ ಬಳಸಿ: ನಿಮ್ಮ ಮಳಿಗೆಗಳಲ್ಲಿ ಸುರಕ್ಷಿತವಾದ ಮತ್ತು ವೇಗವಾದ ಪಾವತಿ ಸಾಧ್ಯವಾಗಲು ಇಎಂವಿಸಿಓ ® ಚಿಪ್ ಆಧಾರಿತ ಸಂಪರ್ಕ ರಹಿತ ಕಾರ್ಡ್ಗಳನ್ನು ಸ್ವೀಕರಿಸುವ ಮತ್ತು ಟೋಕನೈಸ್ಡ್ ಕಾರ್ಡ್ ಮೂಲಕ ಆನ್ ಲೈನ್ ನಲ್ಲಿ ಪಾವತಿ ಮಾಡಬಹುದಾದ ವ್ಯವಸ್ಥೆ ಅಳವಡಿಸಿಕೊಳ್ಳಿ. ಈ ವ್ಯವಸ್ಥೆಗಳು ಎನ್ಕ್ರಿಪ್ಶನ್ ಮತ್ತು ಬಯೋಮೆಟ್ರಿಕ್ ದೃಢೀಕರಣವನ್ನು ಅವಲಂಬಿಸಿವೆ ಅನ್ನುವುದು ಗಮನಾರ್ಹ. ಸುರಕ್ಷಿತ ಪಾವತಿ ವ್ಯವಸ್ಥೆಗಳನ್ನು ಬಳಸಿ: ಇಎಂವಿಸಿಓ® ಮತ್ತು ಪಿಸಿಐ ಡಿಎಸ್ಎಸ್ (ಪೇಮೆಂಟ್ ಕಾರ್ಡ್ ಇಂಡಸ್ಟ್ರಿ ಡೇಟಾ ಸೆಕ್ಯೂರಿಟಿ ಸ್ಟಾಂಡರ್ಡ್) ನಂತಹ ಉದ್ಯಮ ಮಾನದಂಡಗಳನ್ನು ಪಾಲಿಸುವ ವಿಶ್ವಾಸಾರ್ಹ ಪಾವತಿ ವ್ಯವಸ್ಥೆಗಳನ್ನು ಮಾತ್ರ ಅಳವಡಿಸಿಕೊಳ್ಳಿ. ಬಹು ಸೂಕ್ತವಾದ ಭದ್ರತೆ ಮತ್ತು ಎನ್ಕ್ರಿಪ್ಶನ್ ಹೊಂದಿರುತ್ತವೆ. ಸಾಫ್ಟ್ ವೇರ್ ಮತ್ತು ಸಾಧನಗಳನ್ನು ನಿಯಮಿತವಾಗಿ ಅಪ್ ಡೇಟ್ ಮಾಡಿ: ಎಲ್ಲಾ ಸಾಧನಗಳು ಮತ್ತು ಸಾಫ್ಟ್ ವೇರ್ ಗಳನ್ನು ಇತ್ತೀಚಿನ ಹೊಸ ಆವೃತ್ತಿಗೆ ಅಪ್ ಡೇಟ್ ಮಾಡುವುದನ್ನು ಮರೆಯದಿರಿ. ಈ ಮೂಲಕ ಮಾಲ್ ವೇರ್, ಹ್ಯಾಕಿಂಗ್ ಪ್ರಯತ್ನಗಳು ಮತ್ತು ಡೇಟಾ ಕಳ್ಳತನ ಮುಂತಾದ ಸೈಬರ್ ಅಪಾಯಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ. ಖಾತೆಯ ಮೇಲೆ ಸದಾ ನಿಗಾ ಇರಲಿ: ಬ್ಯಾಂಕಿಂಗ್ ಮತ್ತು ಆರ್ಥಿಕ ಆಪ್ ಗಳ ನೋಟಿಫಿಕೇಷನ್ ಗಳನ್ನು ಗಮನಿಸುತ್ತಲೇ ಇರಿ, ವಹಿವಾಟಿನಲ್ಲಿ ವಂಚನೆ ಉಂಟಾಗಬಹುದಾದ ಸಂದರ್ಭಗಳಲ್ಲಿ ಪರಿಶೀಲನೆ ನಡೆಸಿ. ಈ ಸಲಹೆಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಮಹಿಳೆಯರು ಯಶಸ್ವಿ ಉದ್ಯಮವನ್ನು ನಡೆಸಬಹುದು. ಜೊತೆಗೆ ಉತ್ತಮ ರೀತಿಯಲ್ಲಿ ಉದ್ಯಮ ನಡೆಸುವ ಮೂಲಕ ಸ್ಫೂರ್ತಿಯಾಗಬಹುದು ಮತ್ತು ಸಮಾಜ ಅಭಿವೃದ್ಧಿ ಕಾರ್ಯ ಮಾಡಬಹುದು. *ರೋಗಿಯನ್ನು ನಿರೋಗಿಯಾಗಿಸುವ ಕೇಂದ್ರ* *ದೀರ್ಘ ಕಾಲದ ಸಮಸ್ಯೆಗಳಿದ್ದರೂ ಭಯ…
Read More » -
Karnataka News
*ಆಯವ್ಯಯ 2025-26:* *ಪತ್ರಿಕಾಗೋಷ್ಟಿಯಲ್ಲಿ ಸಮಗ್ರ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ*
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಶುಕ್ರವಾರ ತಾವು ಮಂಡಿಸಿದ 2025- 26ನೇ ಸಾಲಿನ ಬಜೆಯ್ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ಸಮಗ್ರ ಮಾಹಿತಿ ನೀಡಿದರು. 1) 2025-26ರ…
Read More » -
Belagavi News
*ಆರ್ಥಿಕ ಅಭಿವೃದ್ಧಿಗೆ ಸ್ಫೂರ್ತಿದಾಯಕ ಬಜೆಟ್: ಸಚಿವ ಸತೀಶ್ ಜಾರಕಿಹೊಳಿ*
ಪ್ರಗತಿವಾಹಿನಿ ಸುದ್ದಿ: 16ನೇ ಬಾರಿಗೆ ದಾಖಲೆಯ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರ ಈ ಬಜೆಟ್ ರಾಜ್ಯದಲ್ಲಿ ಅತ್ಯಂತ ಸ್ಫೂರ್ತಿದಾಯಕ ಬಜೆಟ್ ಇದಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್…
Read More » -
Politics
*ಹಲಾಲ್ ಬಜೆಟ್ ಟೀಕೆ- ಬಿಜೆಪಿಯವರ ಕೊಳಕು ಮನಸ್ಥಿತಿ: ಸಿಎಂ ಸಿದ್ದರಾಮಯ್ಯ ಕಿಡಿ*
4 ಲಕ್ಷ ಕೋಟಿ ರೂ.ಗಳ ಮೀರಿದ ಆಯವ್ಯಯ ಹೊಸ ಮೈಲಿಗಲ್ಲು ಪ್ರಗತಿವಾಹಿನಿ ಸುದ್ದಿ: 2025-26ನೇ ಸಾಲಿನ ಬಜೆಟ್ ಗಾತ್ರ 4,09,549 ಕೋಟಿಯಾಗಿದ್ದು, ಮೊದಲ ಬಾರಿಗೆ ರಾಜ್ಯದ ಆಯವ್ಯಯ…
Read More » -
Belagavi News
*ಬೆಳಗಾವಿ ಮೇಯರ್, ಉಪ ಮೇಯರ್ ಚುನಾವಣೆಗೆ ಮುಹೂರ್ತ ಫಿಕ್ಸ್*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ 23ನೇ ಅವಧಿಗೆ ಮಹಾಪೌರರ ಹಾಗೂ ಉಪ ಮಹಾಪೌರರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಅಧ್ಯಕ್ಷಾಧಿಕಾರಿಗಳು, ಬೆಳಗಾವಿ ಮಹಾನಗರ ಪಾಲಿಕೆ…
Read More » -
Kannada News
*ಇದೊಂದು ಕಾಟಾಚಾರದ ಬಜೆಟ್ : ಡಾ.ಪ್ರಭಾಕರ ಕೋರೆ*
ಪ್ರಗತಿವಾಹಿನಿ ಸುದ್ದಿ: ಕಳೆದ ಎರಡು ವರ್ಷಗಳಿಂದ ರಾಜ್ಯದ ಜನತೆಯನ್ನು ದಾರಿತಪ್ಪಿಸುತ್ತಿರುವ ಸರ್ಕಾರವು ಆರ್ಥಿಕ ಹೊರೆಯನ್ನು ಹೆಚ್ಚಿಸಿದೆ ವಿನಃ ಯಾವುದೇ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ರೂಪಿಸಿಲ್ಲ. ಇದೊಂದು ಕಾಟಾಚಾರದ…
Read More » -
Kannada News
*ಸಿದ್ದರಾಮಯ್ಯ ಅವರದ್ದು ಕೇವಲ ಬಜೆಟ್ ಅಲ್ಲ, ರಾಜ್ಯದ ಜನರಿಗೆ ಕೊಟ್ಟ ಉಡುಗೊರೆ: ಡಿಸಿಎಂ ಡಿ.ಕೆ. ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿ, *ಬೆಂಗಳೂರು* “ಸಿದ್ದರಾಮಯ್ಯ ಅವರು ಮಂಡಿಸಿದ್ದು ಕೇವಲ ಬಜೆಟ್ ಅಲ್ಲ. ರಾಜ್ಯದ ಎಲ್ಲಾ ವರ್ಗದ ಜನರು ಸಂತೋಷ ಪಡುವಂತಹ ಉಡುಗೊರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್…
Read More » -
Belagavi News
*ಮಹಿಳೆ ಕಾಣೆ: ದೂರು ದಾಖಲು*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ವಡ್ಡರವಾಡಿ ರಾಮನಗರ ನಿವಾಸಿ ಉಮಾಶ್ರೀ ಶಂಕರ ಗಾಡಿವಡ್ಡರ (45) ಇವರು ಕಾಣೆ ಆಗಿದ್ದಾರೆ ಎಂದು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
Read More » -
Politics
*ಸಮತೋಲನದಿಂದ ಕೂಡಿರುವ ಬಜೆಟ್: ವಿಧಾನಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ*
ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮಂಡಿಸಿದ ದಾಖಲೆಯ ೧೬ನೇ ಬಜೆಟ್ ಸಮತೋಲನದಿಂದ ಕೂಡಿದ್ದು, ಎಲ್ಲಾ ಕ್ಷೇತ್ರಗಳಿಗೂ ಆದ್ಯತೆ ನೀಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್…
Read More » -
Latest
*ಅಕ್ರಮ ಚಿನ್ನ ಸಾಗಾಟ: ದುಬೈನಿಂದ ಆಗಮಿಸಿದ್ದ ಮತ್ತೋರ್ವ ಆರೋಪಿ ಅರೆಸ್ಟ್*
3,44,38,796 ರೂ.ಮೌಲ್ಯದ ಚಿನ್ನ ಜಪ್ತಿ ಪ್ರಗತಿವಾಹಿನಿ ಸುದ್ದಿ: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು, ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಬರೋಬ್ಬರಿ 399.22…
Read More »