Latest

ಖತರ್ನಾಕ್ ಐಡಿಯಾ ಮಾಡಲು ಹೋಗಿ ತಾನೇ ಸಿಕ್ಕಿಬಿದ್ದ; 2 ಗಂಟೆಯಲ್ಲಿ 4 ಲಕ್ಷ ಕಕ್ಕಿಸಿದ ಪೊಲೀಸರು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹಣ ಲಪಟಾಯಿಸಲು ಸುಳ್ಳು ದೂರು ನೀಡಿದ್ದ ವ್ಯಕ್ತಿಯೊಬ್ಬ ತಾನೇ ಸಿಕ್ಕಿಬಿದ್ದಿರುವ ಪ್ರಕರಣ ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನೌಕರನೊಬ್ಬ ತಾನು ಕಂಪನಿಯ ಹಣ ತೆಗೆದುಕೊಂಡು ಹೋಗುತ್ತಿದ್ದಾಗ ಅಪರಿಚಿತರು ದಾಳಿ ನಡೆಸಿ ಸುಲಿಗೆ ಮಾಡಿರುವುದಾಗಿ ಹೇಳಿ ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಪ್ರಕರಣದ ತನಿಖೆ ನಡೆಸಿದ ಪೊಲೀಸರೆ ಶಾಕ್ ಆಗುವಂತಹ ಸುದ್ದಿ ಬಯಲಾಗಿದೆ. ಕೇವಲ ಎರಡು ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿರುವ ಪೊಲೀಸರು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುಲಿಗೆ ಪ್ರಕರಣದ ಬಗ್ಗೆ ದೂರುದಾರನಿಂದಲೇ ವಿಚಾರಣೆ ಆರಂಭಿಸಿದ ಪೊಲೀಸರಿಗೆ ಆತನೇ ಕಳ್ಳ ಎಂಬ ಅನುಮಾನ ಆರಂಭವಾಗಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸುತ್ತಿದ್ದಂತೆಯೇ ಆರೋಪಿ ಹಣ ಲಪಟಾಯಿಸಲು ಸುಳ್ಳು ದೂರು ನೀಡಿರುವುದಾಗಿ ಬಾಯ್ಬಿಟ್ಟಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು 2 ಗಂಟೆಯಲ್ಲಿ 4 ಲಕ್ಷ ಹಣ ವಶಕ್ಕೆ ಪಡೆದಿದ್ದಾರೆ.

ಬ್ಯಾಟರಾಯನಪುರ ಠಾಣೆ ಪೊಲೀಸರ ತ್ವರಿತ ಕಾರ್ಯಾಚಾರಣೆಗೆ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Home add -Advt

ಶ್ರುತಿ ಹರಿಹರನ್ ಮೀಟೂ ಕೇಸ್; ಬಿ ರಿಪೋರ್ಟ್ ಮಾನ್ಯ ಮಾಡಿದ ಕೋರ್ಟ್

Related Articles

Back to top button