Latest

ಆದಿತ್ಯ ಆಳ್ವಾ ಮನೆಯ ಬಾಗಿಲು ಮುರಿದ ಸಿಸಿಬಿ ಅಧಿಕಾರಿಗಳು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮಾದಕ ದ್ರವ್ಯ ವ್ಯವಹಾರದ 6ನೇ ಆರೋಪಿ ಆದಿತ್ಯ ಆಳ್ವಾ ಅವರ ಮನೆಯ ಬಾಗಿಲು ಮುರಿದು ಒಳ ಪ್ರವೇಶಿಸಿರುವ ಸಿಸಿಬಿ ಅಧಿಕಾರಿಗಳು ಅಲ್ಲಿ ತಪಾಸಣೆ ಕೈಗೊಂಡಿದ್ದಾರೆ.

ತಮ್ಮ ಮೇಲೆ ಆರೋಪ ಬರುತ್ತಿದ್ದಂತೆ ಬಂಧನ ಭೀತಿಯಿಂದ ಆಳ್ವಾ ತಲೆಮರೆಸಿಕೊಂಡಿದ್ದಾರೆ. ಮನೆಯಲ್ಲೇ ನಿರಂತರವಾಗಿ ಸ್ನೇಹಿತರೊಂದಿಗೆ ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದ ಆರೋಪ ಆದಾತ್ಯ ಆಳ್ವಾ ಮೇಲಿದೆ.

ಮಾಜಿ ಸಚಿವ ಜೀವರಾಜ ಆಳ್ವಾ ಮತ್ತು ನಂದಿನಿ ಆಳ್ವಾ ಪುತ್ರನಾಗಿರುವ ಆದಿತ್ಯ ಮನೆಗೆ ಬೀಗ ಹಾಕಲಾಗಿತ್ತು, ಇಷ್ಟು ದಿನ ಕಾದ ಅಧಿಕಾರಿಗಳು ಇದೀಗ ಮನೆಯ ಬೀಗ ಮುರಿದು ಪಂಚನಾಮೆ ನಡೆಸಿದ್ದಾರೆ.

ಆದಿತ್ಯ ಮುಂಬೈನಲ್ಲಿ ತಲೆಮರೆಸಿಕೊಂಡಿರುವ ಶಂಕೆ ಇದೆ.

Home add -Advt

Related Articles

Back to top button