Uncategorized

ಈ ಚುನಾವಣೆ ದೇಶದ ಭವಿಷ್ಯದ್ದಾಗಿದೆ, ಯೋಚಿಸಿ ಮತ ಚಲಾಯಿಸಿ – ಅಣ್ಣಾಸಾಹೇಬ ಜೊಲ್ಲೆ

 

  ಪ್ರಗತಿವಾಹಿನಿ ಸುದ್ದಿ, ಸದಲಗಾ :  ನಮ್ಮ ಒಂದು ಮತದಿಂದ ದೇಶದ ಸಂಸ್ಕೃತಿಯನ್ನು ಅಖಂಡವಾಗಿಡಬಹುದು.  ದೇಶವೇ ನನ್ನ ಪರಿವಾರ ಎಂದು ಭಾವಿಸಿದ  ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಘನತೆಯನ್ನು ವಿಶ್ವ ಮಟ್ಟಕ್ಕೆ ಏರಿಸಲು ಅವಿರತ ಶ್ರಮಿಸಿದ್ದಾರೆ.  ಭಾರತೀಯ ಸಂಸ್ಕೃತಿ, ಹಿಂದೂ ಸಂಸ್ಕೃತಿ ಉಳಿಯಲು ಹಾಗೂ ದೇಶದಲ್ಲಿ ಏಕರೂಪ ನಾಗರಿಕ ಕಾನೂನು ತರಲು ಚಿಕ್ಕೋಡಿಯ ಬಿಜೆಪಿ ಅಧಿಕೃತ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಗೆಲ್ಲಿಸಬೇಕು ಎಂದು ಮಾಜಿ ಶಾಸಕ ಸಂಜಯ ಪಾಟೀಲ ಮನವಿ ಮಾಡಿದರು.

 ಬುಧುವಾರ ಸಮೀಪದ ಸದಲಗಾ ಪಟ್ಟಣದಲ್ಲಿ  ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. 

 ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನತೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.  ಜನ ಧನ ಯೋಜನೆ, ಆಯುಷ್ಯಮಾನ್, ಉಜ್ವಲಾ, ಕಿಸಾನ್ ಸಮ್ಮಾನ್, ಪಿಎಂ.  ಶ್ರೀ ಇಂತಹ ಹತ್ತು ಹಲವಾರು ಯೋಜನೆಗಳನ್ನು  ತಂದಿದ್ದಾರೆ.  ಈ ಚುನಾವಣೆ ದೇಶದ ಭವಿಷ್ಯದ್ದಾಗಿದೆ, ಪ್ರಧಾನಿ ನರೇಂದ್ರ ಮೋದಿಯವರಿಂದ ಇಂದು ದೇಶದ ಘನತೆ ಹೆಚ್ಚಿದೆ ..ದೇಶ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳಲು  ಎಲ್ಲರೂ ಈ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ದೇಶದ ಭದ್ರತೆಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

 ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಇಡೀ ಜಗತ್ತು ಕೆಟ್ಟ ಸ್ಥಿತಿಯಲ್ಲಿತ್ತು.  ಹೀಗಿರುವಾಗ ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ದೇಶವನ್ನು ಮತ್ತು ದೇಶದ ನಾಗರಿಕರನ್ನು ಸುರಕ್ಷಿತವಾಗಿರಿಸಲು ಅವರ ಶ್ರಮ ಇಂದು ಎಲ್ಲಾ ದೇಶಗಳಿಗೆ ಮಾರ್ಗದರ್ಶಿಯಾಗಿದೆ.  ಇಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಕುಟುಂಬ ಎಂದು ನಂಬಿದ ಏಕೈಕ  ಪ್ರಧಾನಿ ನರೇಂದ್ರ ಮೋದಿ.  ಇದಕ್ಕಾಗಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದರು.

 ವಿಧಾನ ಪರಿಷತ್ ಸದಸ್ಯ ಪಿ.ಎಚ್.  ಪೂಜಾರ ಸೇರಿದಂತೆ ಹಲವು ಗಣ್ಯರು  ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.

ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ದುಂಡಪ್ಪ ಭೆಂಡವಾಡೆ, ಮಾಜಿ ಶಾಸಕ ಬಾಳಾಸಾಹೇಬ ವಡರ,ಶಾಂಭವಿ ಅಶ್ವತಪುರ, ಡಾ.ರಾಜೇಶ ನೆರ್ಲಿ, ಚಂದ್ರಶೇಖರ ಕವಟಗಿ, ಜಯಕುಮಾರ ಖೋತ, ರಾಮಗೊಂಡ ಪಾಟೀಲ, ಅಣ್ಣಾ ಪಾಟೀಲ, ಆನಂದ ಪಾಟೀಲ, ಅಭಿನಂದನ ಪಾಟೀಲ, ರಮೇಶ ಮಾನೆ, ಅನಿರುದ್ಧ ಪಾಟೀಲ, ಮಹಾದೇವ ಖೋತ, ಚಿದಾನಂದ ಕಮತೆ, ದರ್ಯಾಪ್ಪ ಹವಾಲ್ದಾರ, ಹೇಮಂತ ಶಿಂಗೆ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

ಬಿಜೆಪಿ ಯುವ ಕಾರ್ಯಕರ್ತ ಅತಿಕ್ರಾಂತ ಪಾಟೀಲ ಸ್ವಾಗತಿಸಿದರು. ಚಿಕ್ಕೋಡಿ ಬಿಜೆಪಿ ಅಭ್ಯರ್ಥಿಯಾದ ಅಣ್ಣಾಸಾಹೇಬ ಜೊಲ್ಲೆ ಅವರು ಚಿಕ್ಕೋಡಿ ಮತಕ್ಷೇತ್ರದ ಸದಲಗಾ ಪಟ್ಟಣದಲ್ಲಿ ಸೈಕಲ್ ರ್ಯಾಲಿಗೆ ಚಾಲನೆ ನೀಡಿದರು. ಪುರಸಭೆ ಸದಸ್ಯರು ಹಾಗೂ ನೂರಾರು ಯುವಕರು ಸಾಥ್ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button