Kannada NewsKarnataka NewsLatestPolitics

*ಈ ಬಗ್ಗೆ ಜಾಗೃತೆ ಇರಲಿ…! ಅರಣ್ಯ ಸಚಿವರಿಂದ ಮಹತ್ವದ ಸಂದೇಶ*

ವನ್ಯಜೀವಿಗಳ ಉಗುರು, ಚರ್ಮ, ಕೊಂಬು ಸಂಗ್ರಹ ಕಾನೂನು ಉಲ್ಲಂಘನೆ

Home add -Advt


ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಸಧ್ಯ ಹುಲಿ ಉಗುರು ಪ್ರಕರಣ ಜೋರಾಗಿದ್ದು, ವನ್ಯ ಜೀವಿಗಳಿಗೆ ಸಂಬಂಧಿಸಿದ ಯಾವುದೇ ವಸ್ತುಗಳು ಇದ್ದರು ಅದು ಕಾನೂನು ಉಲ್ಲಂಘನಾಯುತ್ತದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಹುಲಿ ಉಗುರು ಧರಿಸಿದ್ದ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಬೆನ್ನಲ್ಲೇ ಹುಲಿ ಉಗುರು, ಹುಲಿ ಚರ್ಮ, ಜಿಂಕೆ ಕೊಂಬು ಇಟ್ಟುಕೊಂಡವರಿಗೆ ಸಂಕಷ್ಟ ಎದುರಾಗಿದೆ. ಸೆಲೆಬ್ರಿಟಿಗಳು, ರಾಜಕಾರಣಿಗಳು, ಜ್ಯೋತಿಷಿಗಳು, ಗುರೂಜಿಗಳು, ಅರ್ಚರ ಮನೆ ಮೇಲೆ ಅರಣ್ಯಾಧಿಕರಿಗಳು ದಾಳಿ ನಡೆಸಿ ಇಂತಹ ವಸ್ತುಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.

ಈ ಬೆಳವಣಿಗೆ ಬೆನ್ನಲ್ಲೇ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ, ರಾಜ್ಯದ ಜನತೆಗೆ ಮಹತ್ವದ ಸಂದೇಶ ನೀಡಿದ್ದಾರೆ. ವನ್ಯ ಜೀವಿಗಳ ಉಗುರು, ಚರ್ಮ, ಕೊಂಬು ಧರಿಸುವುದು ಹಾಗೂ ಸಂಗ್ರಹಿಸುವುದು ಕಾನೂನು ಉಲ್ಲಂಘನೆ. 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆಯಾಗುತ್ತದೆ. ಇಂತಹ ಕೃತ್ಯವೆಸಗುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇನ್ನು ಹುಲಿ ಉಗುರು ಧರಿಸಿದವರ ವಿರುದ್ಧ ಈವರೆಗೆ 8 ದೂರುಗಳು ಬಂದಿವೆ ಎಂದು ಇದೇ ವೇಳೆ ತಿಳಿಸಿದ್ದಾರೆ.


Related Articles

Back to top button