Latest

ಶಿಕ್ಷಕರ ಅರ್ಹತಾ ಪರೀಕ್ಷೆ; 3 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯಾದ್ಯಂತ 1200 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಭಾನುವಾರ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆಗೆ 3 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದಾರೆ.

ಪತ್ರಿಕೆ-1 ರ ಪರೀಕ್ಷೆ ಬೆಳಗ್ಗೆ 9.30 ರಿಂದ ನಡೆದಿದ್ದು ಹೆಸರು ನೋಂದಾಯಿಸಿದ್ದ 1,54,929 ಅಭ್ಯರ್ಥಿಗಳಲ್ಲಿ 1,40,801 ಅಭ್ಯರ್ಥಿಗಳು ಹಾಜರಾದರು. 14,128 ಅಭ್ಯರ್ಥಿಗಳು ಗೈರಾದರು.

ಪತ್ರಿಕೆ 2 ಪರೀಕ್ಷೆಗೆ 2,06,455 ಅಭ್ಯರ್ಥಿಗಳು ನೋಂದಾವಣೆ ಮಾಡಿದ್ದು, 1,92,112 ಅಭ್ಯರ್ಥಿಗಳು ಹಾಜರಾದರು. 14,343 ಅಭ್ಯರ್ಥಿಗಳು ಗೈರಾದರು.

ಪತ್ರಿಕೆ 1 ಮತ್ತು ಪತ್ರಿಕೆ 2 ಎರಡೂ ಪರೀಕ್ಷೆಗೆ ಸೇರಿ ಒಟ್ಟು 3,61,384 ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದರು. ಇವರಲ್ಲಿ 3,32,913 ಅಭ್ಯರ್ಥಿಗಳು ಹಾಜರಾದರು. 28,421 ಅಭ್ಯರ್ಥಿಗಳು ಗೈರಾಗಿದ್ದಾರೆ.

Home add -Advt

ಪರೀಕ್ಷಾ ಕೇಂದ್ರದ 200 ಮೀ. ಸುತ್ತ ನಿಷೇಧಾಜ್ಞೆ ವಿಧಿಸಲಾಗಿತ್ತು. ಅಭ್ಯರ್ಥಿಗಳನ್ನು ಕೂಲಂಕುಶವಾಗಿ ತಪಾಸಣೆ ಮಾಡಿ ಪರೀಕ್ಷಾ ಕೊಠಡಿಯೊಳಗೆ ಪ್ರವೇಶ ನೀಡಲಾಯಿತು. ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ರೈತರು ಹೈನೋದ್ಯಮದಲ್ಲಿ ತೊಡಗಲು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕರೆ

https://pragati.taskdun.com/latest/balachandra-jarakiholiguddali-poojenaganur/

Related Articles

Back to top button