
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಾಹನ ಸವಾರರೇ ಎಚ್ಚರಿಕೆಯಿರಲಿ. ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ ಇನ್ಮುಂದೆ ಕ್ರಿಮಿನಲ್ ಕೇಸ್ ಜಿಒತೆಗೆ ಎಫ್ ಐ ಆರ್ ಕೂಡ ದಾಖಲಾಗುತ್ತದೆ.
ಎಲ್ಲೆಂದರಲ್ಲಿ ವಾಹನ ನಿಲುಗಡೆ, ಒನ್ ವೇಯಲ್ಲಿ ಸಂಚಾರ, ನೋ ಪಾರ್ಕಿಂಗ್ ಏರಿಯಾದಲ್ಲಿ ವಾಹನ ನಿಲ್ಲಿಸುವುದು ಸೇರಿದಂತೆ ಟ್ರಾಫಿಕ್ ರೂಲ್ಸ್ ಉಲ್ಲಂಘಿಸುವ ಯಾವುದೇ ತಪ್ಪುಗಳು ನಡೆದರೂ ಅಂತವರ ವಿರುದ್ಧ ಐಪಿಸಿ ಸೆಕ್ಷನ್ 283ರಡಿ ಎಫ್ ಐ ಆರ್ ದಾಖಲಾಗಲಿದೆ. ವಾಹನದ ಮೇಲೆ ಹಾಗೂ ಚಾಲಕನ ಮೇಲೆ ಪೊಲಿಸರು ಕ್ರಿಮಿನಲ್ ಕೇಸ್ ದಾಖಲಿಸಲಿದ್ದಾರೆ.
ಎಫ್ ಐ ಆರ್ ದಾಖಲಾದರೆ ವಾಹನ ಸೀಜ್ ಮಾಡಲಾಗುತ್ತದೆ. ಹೀಗೆ ಸೀಜ್ ಆದ ವಾಹನವನ್ನು ಕೋರ್ಟ್ ಅನುಮತಿ ಪಡೆದು ಬಿಡಿಸಿಕೊಳ್ಳಬೇಕಾಗುತ್ತದೆ.
https://pragati.taskdun.com/lorrycrooseraccident5-death/