Wanted Tailor2
Cancer Hospital 2
Bottom Add. 3

*ಹಬ್ಬದ ದಿನವೇ ಘೋರ ಕೃತ್ಯ; ಚಾಕು ಇರಿದು ಒಂದೇ ಕುಟುಂಬದ ನಾಲ್ವರ ಹತ್ಯೆ*

ಪ್ರಗತಿವಾಹಿನಿ ಸುದ್ದಿ; ಉಡುಪಿ: ದುಷ್ಕರ್ಮಿಯೊಬ್ಬ ಒಂದೇ ಕುಟುಂಬದ ನಾಲ್ವರನ್ನು ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಉಡುಪಿ ಜಿಲ್ಲೆಯ ನೇಜಾರು ಸಮೀಪದ ತೃಪ್ತಿನಗರದಲ್ಲಿ ನಡೆದಿದೆ.

ತಾಯಿ ಹಾಗೂ ಮೂವರು ಮಕ್ಕಳನ್ನು ಬರ್ಬರವಾಗಿ ಕೊಲೆಗೈದು ದುಷ್ಕರ್ಮಿ ಪರಾರಿಯಾಗಿದ್ದಾನೆ. ಹಸೀನಾ (46), ಅಫ್ನಾನ್(23), ಅಯ್ನಾಜ್ (21), ಆಸಿಂ (12) ಮೃತರು.

ಘಟನಾ ಸ್ಥಳಕ್ಕೆ ಮಲ್ಫೆ ಠಾಣೆಯ ಪೊಲೀಸರು ಭೇತಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಸ್ಕ್ ಧರಿಸಿ ಮನೆಗೆ ನುಗ್ಗಿದ ದುಷ್ಕರ್ಮಿ ಮೊದಲು ಮಹಿಳೆ ಬಳಿಕ ಮೂವರು ಮಕ್ಕಳಿಗೆ ಚಾಕು ಇರಿದು ಕೊಂದಿದ್ದಾನೆ. ಇನ್ನೋರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಿರುಚಾಡುತ್ತಿದ್ದಂತೆ ಪಕ್ಕದ ಮನೆಯವರು ಹೊರಬರುತ್ತಿದ್ದಂತೆ ಅವರಿಗೂ ಬೆದರಿಕೆ ಹಾಕಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ ಎಂದು ತಿಳಿದುಬಂದಿದೆ.


Bottom Add3
Bottom Ad 2

You cannot copy content of this page